Connect with us

    DAKSHINA KANNADA

    ದೇಶವನ್ನು ಉದ್ಧೇಶಿಸಿ ಇಂದು ಮತ್ತೆ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

    ದೇಶವನ್ನು ಉದ್ಧೇಶಿಸಿ ಇಂದು ಮತ್ತೆ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

    ಮಂಗಳೂರು, ಮೇ 12: ಮಹತ್ವದ ಬೆಳವಣಿಗೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ಧೇಶಿಸಿ ಮಾತನಾಡಲಿದ್ದು, ದೇಶದ ಜನತೆಗೆ ಯಾವ ಸಂದೇಶವನ್ನು ನೀಡಲಿದ್ದಾರೆ ಎನ್ನುವ ಕುತೂಹಲ ಮೂಡಲಾರಂಭಿಸಿದೆ.

    ದೇಶದೆಲ್ಲೆಡೆ ಮೇ 17 ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಲಾಕ್ ಡೌನ್ ಮತ್ತೆ ಮುಂದುವರಿಸುವ ಸೂಚನೆ ನೀಡುತ್ತಾರೆಯೋ, ಅಥವಾ ಲಾಕ್ ಡೌನ್ ನಿಯಮವನ್ನು ರದ್ದು ಮಾಡುತ್ತಾರೆಯೋ ಎನ್ನುವ ಲೆಕ್ಕಾಚಾರವನ್ನು ಜನ ಮಾಡಲಾರಂಭಿಸಿದ್ದಾರೆ.

    ದೇಶದೆಲ್ಲೆಡೆ ಲಾಕ್ ಡೌನ್ ನ ನಿಯಮದಲ್ಲಿ ಸಡಿಲಿಕೆ ಮಾಡಿದ ಬಳಿಕ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿರುವುದು ದೇಶದ ಹಿತದೃಷ್ಟಿಯಿಂದ ಕೆಟ್ಟ ಬೆಳವಣಿಗೆಯಾಗಿದ್ದು, ಈ ನಿಟ್ಟಿನಲ್ಲೂ ಪ್ರಧಾನಿಯ ಇಂದಿನ ಸಂದೇಶ ಅತ್ಯಂತ ಮಹತ್ವ ಪಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply