LATEST NEWS
ಪಿಎಫ್ಐ ನ ಎಸ್ಪಿ ಚಲೋ ಪ್ರತಿಭಟನೆ – ಹಂಪನಕಟ್ಟೆ ಸುತ್ತಮುತ್ತ ಖಾಕಿ ಸರ್ಪಗಾವಲು
ಮಂಗಳೂರು ಡಿಸೆಂಬರ್ 17: ಉಪ್ಪಿನಂಗಡಿ ಲಾಠಿ ಚಾರ್ಜ್ ಘಟನೆಯನ್ನು ಖಂಡಿಸಿ ಪಿಎಫ್ಐ ಸಂಘಟನೆ ಇಂದು ನಡೆಸಲಿರುವ ಎಸ್ಪಿ ಚಲೋ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಪ್ರತಿಭಟನೆ ನಡೆಯುವ ಸ್ಥಳವಾದ ಹಂಪನಕಟ್ಟಾ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಈಗಾಗಲೇ ಪೊಲೀಸ್ ಆಯುಕ್ತ ಶಶಿಕುಮಾರ್ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆ ಇಂದು ಕರೆ ನೀಡಿರುವ ಪ್ರತಿಭಟನೆ ಹಾಗೂ ರ್ಯಾಲಿಯಲ್ಲಿ ಪ್ರತಿಭಟನೆಗೆ ಮಾತ್ರ ಮಂಗಳೂರು ತಾಲೂಕು ಕಚೇರಿ ಮುಂದೆ ಅವಕಾಶ ನೀಡಿದ್ದಾರೆ.
ಯಾವುದೇ ರ್ಯಾಲಿ ಅಥವಾ ಜಾಥಾ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
You must be logged in to post a comment Login