Connect with us

    LATEST NEWS

    ವಿಂಗ್ ಕಮಾಂಡರ್ ಅಭಿನಂದನ್ ಗೆ ಸಾವಿರ ಸಾವಿರ ಅಭಿನಂದನೆಗಳು – ಪೇಜಾವರ ಶ್ರೀ

    ವಿಂಗ್ ಕಮಾಂಡರ್ ಅಭಿನಂದನ್ ಗೆ ಸಾವಿರ ಸಾವಿರ ಅಭಿನಂದನೆಗಳು – ಪೇಜಾವರ ಶ್ರೀ

    ಉಡುಪಿ ಮಾರ್ಚ್ 1: ಭಾರತ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತೋರಿದ ದೈರ್ಯ ಮೆಚ್ಚುವಂತದಾಗಿದ್ದು, ಶತ್ರು ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವ ಹೆಚ್ಚಿಸಿದೆ.ವಿಂಗ್ ಕಮಾಂಡರ್ ಅಭಿನಂದನ್ ಗೆ ನನ್ನ ಸಾವಿರ ಸಾವಿರ ಅಭಿನಂದನೆಗಳು ಎಂದು ಪೇಜಾವರ ಶ್ರೀಗಳು ಅಭಿನಂದಿಸಿದ್ದಾರೆ.

    ಪಾಕಿಸ್ತಾನ ಮತ್ತು ಭಾರತ ಮಧ್ಯೆ ನಡೆಯುವ ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆ. ಯುದ್ಧದಿಂದ ನಮ್ಮ ಸೈನಿಕರ ಸಾವಾಗುತ್ತದೆ. ಆದರೆ ದೇಶದ ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ಪೇಜಾವರ ಶ್ರೀಗಳು ಹೇಳಿದರು. ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಪೇಜಾವರ ಶ್ರೀಗಳು ,ಮೋದಿಯವರ ಅಭಿವೃದ್ಧಿ ಮತ್ತು ಧೈರ್ಯ. ದಿಟ್ಟತನವನ್ನು ನಾನು ಮೆಚ್ಚುತ್ತೇನೆ, ನರೇಂದ್ರ ಮೋದಿಯವರು ಸೂಕ್ತ ಸಮಯದಲ್ಲಿ ಪ್ರಧಾನಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಸದ್ಯದ ಎರ್ ಸ್ಟ್ರೈಕ್ ನಿಂದ ಬಿಜೆಪಿಗೆ 22 ಸೀಟು ಸಿಗಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು ಇದೊಂದು ಚಿಕ್ಕ ವಿಚಾರವಾಗಿದ್ದು, ಇದು ದೊಡ್ಡ ವಿಷಯವಲ್ಲ, ಈ ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಯುದ್ಧ ಆಗಿದೆ, ಆಗ ಕಾಂಗ್ರೆಸ್ ಗೆ ಉಪಯೋಗವಾಗ್ತದೆ ಅಂತ ಎಲ್ಲರು ಹೇಳಿಕೊಂಡಿದ್ದರು ಎಂದರು. ಈ ಹಿನ್ನಲೆಯಲ್ಲಿ ಬಿಎಸ್ ವೈ ಹೇಳಿಕೆಯನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ ಎಂದರು.

    ದೇಶಕ್ಕೆ ತೊಂದರೆ ಕೊಡುವ ಉಗ್ರರ ಸಂಹಾರ ಆಗಬೇಕು, ಆದರೆ ಅಮಾಯಕರ ಹತ್ಯೆ ಆಗಬಾರದು, ಉಗ್ರರನ್ನು ಹುಡುಕಿ ಕೊಲ್ಲಬೇಕು, ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದು ಹೇಳಿದರು.

    ದೇಶದ ಬುದ್ಧಿಜೀವಿಗಳು ಬಗ್ಗೆ ದೇಶದ ಜನರಲ್ಲಿ ತಿರಸ್ಕಾರ ಉಂಟಾಗಿದೆ, ಇಂತಹ ಕಠಿಣ ಸಂದರ್ಭದಲ್ಲೂ ಅವರಿಗೆ ದೇಶಾಭಿಮಾನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು , ಬುದ್ಧಿಜೀವಿಗಳಿಗೆ ಒಳ್ಳೆ ಬುದ್ದಿ ಕೊಡಬೇಕು, ಬುದ್ಧಿಜೀವಿಗಳು ದುರ್ಬುದ್ಧಿ ಜೀವಿಗಳು ಆಗಬಾರದು , ಬುದ್ದಿಜೀವಿಗಳಿಗೆ ಸದ್ಭುದ್ದಿಜೀವಿಗಳಾಗಲಿ ಬುದ್ದಿಜೀವಿಗಳಿಗೆ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply