Connect with us

    LATEST NEWS

    ಪಟ್ಲ ಸತೀಶ್ ಶೆಟ್ಟಿ ವಿವಾದ – ಇಂದು ಕಟೀಲಿನಲ್ಲಿ ಸಂಧಾನ ಮಾತುಕತೆ

    ಪಟ್ಲ ಸತೀಶ್ ಶೆಟ್ಟಿ ವಿವಾದ – ಇಂದು ಕಟೀಲಿನಲ್ಲಿ ಸಂಧಾನ ಮಾತುಕತೆ

    ಮಂಗಳೂರು ಡಿ.19: ಕಟೀಲು ಮೇಳದಿಂದ ಹೊರಹಾಕಲ್ಪಟ್ಟ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಮರು ಸೇರ್ಪಡೆ ಕುರಿತಂತೆ ಹೈಕೋರ್ಟ್ ಸೂಚನೆ ಮೆರೆಗೆ ಇಂದು ಕಟೀಲಿನಲ್ಲಿ ಸಂಧಾನ ಮಾತುಕತೆ ನಡೆಯಲಿದೆ.

    ಕಟೀಲು ಮೇಳದಿಂದ ಏಕಾಏಕಿ ತನ್ನನ್ನು ಹೊರಹಾಕಿರುವುದರ ವಿರೋಧಿಸಿ, ಮೇಳಕ್ಕೆ ತನ್ನನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಪಟ್ಲ ಸತೀಶೆ ಶೆಟ್ಟಿ ಜಿಲ್ಲಾಡಳಿತದ ಮೊರೆ ಹೋಗಿದ್ದರು.

    ಆದರೆ ವಿವಾದ ಇತ್ಯರ್ಥ ಆಗಿರಲಿಲ್ಲ. ಈ ಹಿನ್ನಲೆಯಲ್ಲಿ ಮೇಳದಿಂದ ತನ್ನನ್ನು ಹೊರಹಾಕಿರುವುದರ ವಿರುದ್ದ ಪಟ್ಲ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಈ ಕುರಿತು ವಿಚಾರಣೆ ಕೈಗೆತ್ತಿಗೊಂಡ ಹೈಕೋರ್ಟ್ ಡಿ.19ರ ಮಧ್ಯಾಹ್ನದ ಒಳಗೆ ಸಂಧಾನ ನಡೆಸಲು ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಕ್ಷೇತ್ರದಲ್ಲಿ ಸಂಧಾನ ಮಾತುಕತೆ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply