Connect with us

    LATEST NEWS

    ಕಾಂಗ್ರೇಸ್ ಸರಕಾರದಿಂದ ಜನರಿಗೆ ಅನ್ನದಾನ – ಉಮ್ಮನ್ ಚಾಂಡಿ

    ಕಾಂಗ್ರೇಸ್ ಸರಕಾರದಿಂದ ಜನರಿಗೆ ಅನ್ನದಾನ – ಉಮ್ಮನ್ ಚಾಂಡಿ

    ಸುರತ್ಕಲ್ ಮೇ 3: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ತರೆಯುವ ಮೂಲಕ ಕೇವಲ 5 ರೂಪಾಯಿಗೆ ತಿಂಡಿ ಹಾಗೂ 10 ರೂಪಾಯಿಗೆ ಊಟ ನೀಡುವ ಮೂಲಕ ಅನ್ನದಾನ ಮಾಡುವ ಮಹತ್ಕಾರ್ಯ ಮಾಡಿ ಸಾಧನೆಗೈದಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.

    ಸುರತ್ಕಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತ್ತೆ ಬಾರದೆ ಇರಲು ಕಾರಣಗಳೇ ಇಲ್ಲ. ಅನ್ನ, ವಸತಿ, ಶಿಕ್ಷಣ ,ರೈತರ ಸಾಲ ಮನ್ನದಂತಹ ಪ್ರಮುಖ ನಿರ್ಧಾರ ಕೈಗೊಳ್ಳುವುದು ಸುಲಭವಲ್ಲ. ಐದು ವರ್ಷದಲ್ಲಿ ಏಕ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸಿದ ಸಿದ್ದರಾಮಯ್ಯ ಬಲಾಡ್ಯರು ಎಂದು ಶ್ಲಾಘಿಸಿದರು.

    ಕೇಂದ್ರ ಸರಕಾರ ಕಚ್ಚಾ ತೈಲದ ದರ ಇಳಿದರೂ ಇಂದಿಗೂ ತೆರಿಗೆ ಕಡಿಮ ಮಾಡಿಲ್ಲ ಬಡ ವರ್ಗದ ಮೇಲೆ ತೆರಿಗೆಯ ಹೊರೆ ಹೊರಿಸಿ ಇತರರು ಬ್ಯಾಂಕ್ ಲೂಟಿ ಬಿಟ್ಟಿದೆ. 2019 ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಮರಳುವುದಿಲ್ಲ ಎಂದರು.

    ಮಂಗಳೂರು ಉತ್ತರದ ಶಾಸಕನಾಗಿ ಕೆಲಸ ಮಾಡಿರುವ ಮೊದಿನ್ ಬಾವಾ ನನ್ನ ಆತ್ಮೀಯರು ಅವರ ಶ್ರಮದಿಂದ ಸುರತ್ಕಲ್ ಬೆಳೆದಿದೆ. ಹಿಂದ ಬಂದ ಸ್ಥಿತಿಗೂ ಈಗಿರುವ ಸ್ಥಿತಿಗೂ ಅಗಾಧ ಅಭಿವೃದ್ಧಿ ಕಾಮಗಾರಿ ನಡೆಸುವ ಮೂಲಕ ಸ್ವಚ್ಚವಾಗಿ ಕಾಣುತ್ತಿದೆ. ಇಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply