LATEST NEWS
ವಿವಾದಾತ್ಮಕ ಗೋಡೆ ಬರಹ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಮಂಗಳೂರು ಡಿಸೆಂಬರ್ 3: ಮಂಗಳೂರು ನಗರದಲ್ಲಿ ಉಗ್ರರ ಪರ ಗೊಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಎಂದು ಗುರುತಿಸಲಾಗಿದೆ.
ಕದ್ರಿ ಪೊಲೀಸರು ಗುರುವಾರ ಮುಂಜಾನೆ ಆತನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್ 27 ರಂದು ಬಿಜೈ ಬಳಿ ಅಪಾರ್ಟ್ಮೆಂಟ್ ಒಂದರ ಕೌಂಪೌಂಡ್ನ ಮೇಲೆ, ಸಂಘಿಗಳನ್ನು ಎದುರಿಸಲು ಲಷ್ಕರ್ ಇ ತೋಯ್ಬಾ ಹಾಗೂ ತಾಲಿಬಾನ್ಗೆ ಆಹ್ವಾನ ನೀಡುವಂತೆ ನಮ್ಮನ್ನು ಪ್ರೇರೇಪಿಸಬೇಡಿ (“Do not force us to invite Lashkar-e-Toiba and Taliban to Deal with Sanghis and Manvedis”) ಎಂದು ಬರೆದಿದ್ದು ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್ ಜಿಂದಾಬಾದ್” ಎಂದು ಕೂಡಾ ಬರೆಯಲಾಗಿತ್ತು.
ಇದಾದ ಎರಡು ದಿನಗಳ ನಂತರ ನವೆಂಬರ್ 29 ರಂದು ಮಂಗಳೂರಿನ ಕೋರ್ಟ್ ರಸ್ತೆಯ ಆವರಣದಲ್ಲಿ ಹಳೆ ಪೊಲೀಸ್ ಔಟ್ ಪೋಸ್ಟ್ ನ ಗೊಡೆ ಮೇಲೆ ಉರ್ದುವಿನಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿತ್ತು.
You must be logged in to post a comment Login