LATEST NEWS
ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ- ನೀತಿ ತಂಡದ ವಿನೂತನ ಚಳವಳಿ
ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ- ನೀತಿ ತಂಡದ ವಿನೂತನ ಚಳವಳಿ
ಮಂಗಳೂರು, ಡಿಸೆಂಬರ್ 25: ಬ್ಯಾಂಕ್ ಗೆ ಬಂದ ಜನಸಾಮಾನ್ಯರನ್ನು ಪ್ರಾಣಿಗಳಂತೆ ಕ್ಯಾಕರಿಸಿ ನೋಡುವ, ಜೀವಮಾನದಲ್ಲಿ ನಗುವೆನ್ನುವುದನ್ನೇ ನೋಡದ ಬ್ಯಾಂಕ್ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರದ ವಿರುದ್ಧ ಇದೀಗ ಜನ ತಿರುಗಿ ಬೀಳುವ ಲಕ್ಷಣ ಕಂಡು ಬರಲಾರಂಭಿಸಿದೆ.
ಬೇರೆ ಯಾವ ಉದ್ಯೋಗಿಗಳಿಗೂ ಇಲ್ಲದ ಸವಲತ್ತು, ಸಂಬಳ ಪಡೆದುಕೊಳ್ಳುವ ಈ ಬ್ಯಾಂಕ್ ಉದ್ಯೋಗಿಗಳು ವರ್ಷಕ್ಕೊಮ್ಮೆ ತಮ್ಮ ಸಂಬಳ ಹೆಚ್ಚಿಸಬೇಕೆಂದು ಬ್ಯಾಂಕ್ ಬಂದ್ ಮಾಡಿ ಮುಷ್ಕರ ಮಾಡುತ್ತಿರುವುದು ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದೆ.
ಇಷ್ಟೊಂದು ಸಂಬಳ ,ಸವಲತ್ತು ಪಡೆಯುತ್ತಿರುವ ಈ ಉದ್ಯೋಗಿಗಳು ತಮ್ಮ ಬ್ಯಾಂಕ್ ಗೆ ಬರುವ ಗ್ರಾಹಕರನ್ನು ನಡೆಸಿಕೊಳ್ಳುವ ರೀತಿಯನ್ನು ನೆನೆಸಿಕೊಂಡರೇ ವಾಕರಿಕೆ ಬರುತ್ತಿದೆ.
ತನ್ನ ಚೇರ್ ನಲ್ಲಿ ಕೂತ ಬಳಿಕ ಈ ಸಿಬ್ಬಂದಿಗೆ ನಗು, ಮಾತು ಎಲ್ಲವೂ ಮರೆತು ಹೋಗುತ್ತವೆ.
ವ್ಯವಹಾರ ಜ್ಞಾನವಿಲ್ಲದೆ ಬರುವ ಜನಸಾಮಾನ್ಯನ ಜೊತೆ ಈ ಸಿಬ್ಬಂದಿಗಳು ವ್ಯವಹರಿಸುವ ರೀತಿ ನೋಡಿದಲ್ಲಿ ಈ ಸಿಬ್ಬಂದಿಗಳಿಗೆ ಸಂಬಳವಲ್ಲ, ಕತ್ತು ಹಿಡಿದು ಹೊರ ದೂಡಬೇಕೆ ಎನ್ನುವ ಚಿಂತನೆ ಬರದವರಿಲ್ಲ.
ತಿಂಗಳಿಗೆ ಗರಿಷ್ಟವೆಂದರೆ 20 ದಿನಗಳು ದುಡಿಯುವ ಈ ಸಿಬ್ಬಂದಿಗಳು ಪ್ರತಿ ಬಾರಿಯೂ ವೇತನ ಹೆಚ್ಚಿಸಬೇಕೆಂದು ಮುಷ್ಕರ ನಡೆಸುತ್ತಿರುವುದರ ವಿರುದ್ಧ ನೀತಿ ತಂಡ ಎನ್ನುವ ಸಂಘಟನೆ ಸಾಮಾಜಿಕ ಜಾಲತಾಣದಲ್ಲೇ ಚಳವಳಿಯೊಂದನ್ನು ನಡೆಸಲು ತೀರ್ಮಾನಿಸಿದೆ.
ಯಾವ ರೀತಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಘೋಷಣೆಯಂತೆ , ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ ಎನ್ನುವ ವಿನೂತನ ರೀತಿಯ ಘೋಷ ವಾಕ್ಯದೊಂದಿಗೆ ಈ ಚಳವಳಿ ನಡೆಯಲಿದೆ.
ಈಗಾಗಲೇ ಈ ಕುರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾಂಭಿಸಿದೆ.
Facebook Comments
You may like
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಸಾಸ್ತಾನ ನವಯುಗ ಟೋಲ್ ಗೇಟ್ ವಿರುದ್ದ ಸ್ಥಳೀಯರ ಬೃಹತ್ ಪ್ರತಿಭಟನಾ ಸಭೆ
ಮನೆ ಜಪ್ತಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿ ಎದುರೆ ನೇಣಿಗೆ ಶರಣಾದ ಮನೆ ಮಾಲೀಕನ ಪತ್ನಿ
ಟಾಪ್ ಲೆಸ್ ಪೋಟೋ ದಲ್ಲಿ ಗಣೇಶ ವಿಗ್ರಹ..ಪಾಪ್ ಸಿಂಗರ್ ರಿಹಾನ್ ವಿರುದ್ದ ಆಕ್ರೋಶ
ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ
ಬ್ಯಾಂಕ್ ಗಳಿಗೆ ವಂಚನೆ – ಉದ್ಯಮಿ ಬಿ.ಆರ್ ಶೆಟ್ಟಿಯ ಪ್ರಪಂಚಾದ್ಯಂತ ಇರುವ ಆಸ್ತಿಗಳ ಮುಟ್ಟುಗೋಲಿಗೆ ಲಂಡನ್ ಕೋರ್ಟ್ ಸೂಚನೆ
You must be logged in to post a comment Login