Connect with us

    LATEST NEWS

    ಪೂಕಳಂ ನಂತರ ಎಚ್ಚೆತ್ತ ಅಧಿಕಾರಿಗಳು ,ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆ ಹೊಂಡಕ್ಕೆ ತೆಪೆ

    ಮಂಗಳೂರು ಸೆಪ್ಟೆಂಬರ್ 3: ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆಯಲ್ಲಿರುವ ಹೊಂಡಗಳಲ್ಲಿ ಓಣಂ ನ ಪೂಕಳಂ ರಚಿಸಿದ ನಂತರ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗ ಸರ್ವಿಸ್ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದೆ.


    ಪಂಪ್ ವೆಲ್ ಪ್ಲೈಓವರ್ ಕಾಮಗಾರಿ ಮುಗಿದ ನಂತರ ತರಾತುರಿಯಲ್ಲಿ ನಿರ್ಮಿಸಿದ್ದ ಸರ್ವಿಸ್ ರಸ್ತೆ ಈ ಬಾರಿಯ ಮಳೆಗೆ ಸಂಪೂರ್ಣ ಹಾಳಾಗಿದ್ದು, ರಸ್ತೆಯ ತುಂಬೆಲ್ಲಾ ಹೊಂಡಗಳೆ ಕಾಣುತ್ತಿತ್ತು. ಪಂಪ್ ವೆಲ್ ಕಾಮಗಾರಿ ಸಂದರ್ಭ 10 ವರ್ಷಗಳವರೆಗೆ ವಾಹನ ಸಂಚಾರಕ್ಕೆ ಕಷ್ಟವಾಗಿದ್ದ ಇದೇ ರಸ್ತೆಯಲ್ಲಿ ಪ್ಲೈಓವರ್ ಆದ ನಂತರವೂ ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆ ಮಂಗಳೂರಿನ ಶೈಕ್ಷಣಿಕ ಸಲಹೆಗಾರರಾದ ರಾಧಿಕ ಧೀಮಂತ್‌ ಅವರು ಸೆಪ್ಟೆಂಬರ್ 1ರಂದು ಪಂಪ್ ವೆಲ್ ಪ್ಲೈಓವರ್ ನ ಸರ್ವಿಸ್ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಇವರು ಸರ್ವಿಸ್ ರಸ್ತೆಯಲ್ಲಿ ಮಾಡಿರುವ ಪೂಕಳಂ ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


    ಇದರಿಂದ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಪಂಪ್ ವೆಲ್ ಸರ್ವಿಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply