Connect with us

    LATEST NEWS

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ರವರೆಗೆ ಬಸ್ ಸಂಚಾರಕ್ಕೆ ಅವಕಾಶ

    ಮಂಗಳೂರು ಜೂನ್ 22: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅನ್ ಲಾಕ್ ಕುರಿತಂತೆ ನಾಳೆಯಿಂದಲೇ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು, ಅದರಂತೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರ ತನಗ ಬಸ್ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.


    ಈಗಾಗಲೇ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳನ್ನು ರಾಜ್ಯ ಸರಕಾರ ಅನ್ಲಾಕ್ ಮಾಡಿ ಆದೇಶ ಹೊರಡಿಸಿತ್ತು, ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವ ಕಾರಣ ಲಾಕ್ ಡೌನ್ ಮುಂದುವರೆಸಲಾಗಿತ್ತು, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ ಹಿನ್ನಲೆ ಸಿಎಂ ಬಿಎಸ್ ವೈ ಅವರು ಅನ್ಲಾಕ್ 2 ರ ಮಾರ್ಗಸೂಚಿಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಾರಿಗೆ ತರಲು ಆದೇಶಿಸಿದ್ದರು.


    ಅದರಂತೆ ಜಿಲ್ಲಾಡಳಿತ ನಾಳೆಯಿಂದ ಜಾರಿಗೆ ಬರುವಂತೆ ಹೊಸ ಮಾರ್ಗದರ್ಶಿ ಸೂತ್ರ ಹೊರಡಿಸಿದೆ. ಅದರಂತೆ ಬೆಳಿಗೆ 7 ರಿಂದ ದ ಮಧ್ಯಾಹ್ನ 2ರ ತನಕ ಎಲ್ಲಾ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೇ ಮಾಲ್ ಗಳು, ಹವಾನಿಯಂತ್ರಿತ ಕಾಂಪ್ಲೆಕ್ಸ್ ಗಳಿಗೂ ಓಪನ್ ಮಾಡುವ ಹಾಗೆ ಇಲ್ಲ. ಇನ್ನು ಹೋಟೇಲ್ ಗಳಲ್ಲಿ 50% ಜನರಿಗೆ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ ನಂತರ ಹೋಟೇಲ್ ಗಳಲ್ಲಿ ಪಾರ್ಸೆಲ್ ನೀಡಲು ಅವಕಾಶ ಇದೆ. ಇನ್ನು ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಶೇಕಡ 50 ರಷ್ಟು ಪ್ರಯಾಣಿಕರೊಂದಿಗೆ ಸಂಚಾರ ನಡೆಸಬಹುದಾಗಿದೆ.

    ಇನ್ನು ದೇವಸ್ಥಾನ, ಧಾರ್ಮಿಕ ಕೇಂದ್ರ, ಚರ್ಚ್ , ಮಸೀದಿಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 7ರ ತನಕ ವೀಕೇಂಡ್ ಕರ್ಫ್ಯೂ ಇರಲ್ಲಿದ್ದು, ಈ ಸಂದರ್ಭ ವೀಕೆಂಡ್ ಕರ್ಫ್ಯೂ ಸಂದರ್ಭ ಹಾಲಿನ ಬೂತ್ ಗಳಿಗೆ ಮಾತ್ರ ಅವಕಾಶ ಇದೆ, ಈ ಸಂದರ್ಭದಲ್ಲಿ ಬೇರೆ ಅಂಗಡಿಗಳು ಓಪನ್ ಇರಲ್ಲ, ಪ್ರತಿ ದಿನ ಸಂಜೆ 7ರಿಂದ ಬೆಳಿಗ್ಗೆ 7ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply