Connect with us

    DAKSHINA KANNADA

    ಮರಳಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಹೊಸ ಕಾರು

    ಮರಳಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಹೊಸ ಕಾರು

    ಪುತ್ತೂರು ಫೆಬ್ರವರಿ 12: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣದಲ್ಲಿ ಖರೀದಿಯಾದ ಕಾರು ಮತ್ತೆ ಕ್ಷೇತ್ರಕ್ಕೆ ತಲುಪಿದೆ. ಫೆಬ್ರವರಿ 10 ರಂದು ಸುಮಾರು 26 ಲಕ್ಷ ರೂಪಾಯಿ ಮೌಲ್ಯದ ಕಾರು ಮಂಗಳೂರಿನ ಟೊಯೋಟಾ ಶೋರೂಂ ನಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಬದಲು ನೇರವಾಗಿ ಬೆಂಗಳೂರಿನ ಧಾರ್ಮಿಕ ಧತ್ತಿ ಆಯುಕ್ತರ ಕಛೇರಿಗೆ ತಲುಪಿತ್ತು.

    ಹೊಸ ಕಾರನ್ನು ಅಲ್ಲೇ ಉಪಯೋಗಿಸುವ ಲೆಕ್ಕಾಚಾರ ವನ್ನೂ ಇಲಾಖೆಯ ಅಧಿಕಾರಿಗಳು ನಡೆಸಿದ್ದರು. ಆದರೆ ಈ ನಿರ್ಧಾರಕ್ಕೆ ಸುಬ್ರಹ್ಮಣ್ಯ ದ ಸಾರ್ವಜನಿಕರಿಂದ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಕ್ಷೇತ್ರದ ಹಣದಲ್ಲಿ ಖರೀದಿಸಿದ ಕಾರು ಕ್ಷೇತ್ರದ ಉಪಯೋಗಕ್ಕೇ ಬಳಕೆಯಾಗಬೇಕೆಂಬ ಒತ್ತಾಯವೂ ಕೇಳಿ ಬರುತ್ತಿತ್ತು.

    ಈ ಕುರಿತು ಮ್ಯಾಂಗಲೂರು ಮಿರರ್ ನ ನಿರಂತರ ವರದಿಯ ಬಳಿಕ ಎಚ್ಚೆತ್ತುಕೊಂಡ ಇಲಾಖಾ ಅಧಿಕಾರಿಗಳು ಹೊಸ ಕಾರನ್ನು ಮತ್ತೆ ಸುಬ್ರಹ್ಮಣ್ಯ ಕ್ಕೆ ಕಳುಹಿಸಿಕೊಟ್ಟಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply