Connect with us

LATEST NEWS

ಬೈಂದೂರು ಈಜಲು ತೆರಳಿದ್ದ ಇಬ್ಬರು ವಿಧ್ಯಾರ್ಥಿಗಳು ನೀರುಪಾಲು ಇಬ್ಬರ ರಕ್ಷಣೆ

ಬೈಂದೂರು ಈಜಲು ತೆರಳಿದ್ದ ಇಬ್ಬರು ವಿಧ್ಯಾರ್ಥಿಗಳು ನೀರುಪಾಲು ಇಬ್ಬರ ರಕ್ಷಣೆ

ಉಡುಪಿ ಅಕ್ಟೋಬರ್ 17: ನದಿಗೆ ಈಜಲು ತೆರಳಿದ್ದ ನಾಲ್ವರು ಶಾಲಾ ವಿಧ್ಯಾರ್ಥಿಗಳ ಪೈಕಿ ಇಬ್ಬರು ನಾಪತ್ತೆಯಾಗಿರುವ ಘಟನೆ ಬೈಂದೂರು ಸಮೀಪದ ಹಳಗೇರಿ ನದಿಯಲ್ಲಿ ನಡೆದಿದೆ.

ನಾಗೂರಿನ ಸಂದೀಪನ್ ಶಾಲೆಯ 9 ಮಂದಿ ವಿಧ್ಯಾರ್ಥಿಗಳು ನಾಗೂರಿನ ಕೊಕ್ಕೇಶ್ವರ ದೇವಸ್ಥಾನದ ಬಳಿ ಇರುವ ನದಿಗೆ ಈಜಲು ತೆರಳಿದ್ದಾರೆ. ನಾಲ್ವರು ವಿಧ್ಯಾರ್ಥಿಗಳು ನೀರಿಗೆ ಇಳಿದು ಈಜಲು ತೆರಳಿದ್ದಾರೆ. ಈ ಸಂದರ್ಭ ವಿಧ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಇದನ್ನು ಕಂಡ ಸ್ಥಳೀಯರು ಇಬ್ಬರು ವಿಧ್ಯಾರ್ಥಿಗಳನ್ನು ಬಜಾವ್ ಮಾಡಿದ್ದು, ಮತ್ತೆ ಇಬ್ಬರು ವಿಧ್ಯಾರ್ಥಿಗಳು ನೀರು ಪಾಲಾಗಿದ್ದಾರೆ.

ನೀರು ಪಾಲಾದ ವಿಧ್ಯಾರ್ಥಿಗಳನ್ನು ವಂಶಿತ್ ಶೆಟ್ಟಿ (12) ಹಾಗೂ ರಿತೇಶ್ ಶೆಟ್ಟಿ (12) ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ವಿದ್ಯಾರ್ಥಿಗಳು ದೋಣಿ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *