LATEST NEWS
ಅನೈತಿಕ ಸಂಬಂಧ ಪ್ರಶ್ನಿಸಿದವ ಹೆಣವಾದ..ಬ್ರಹ್ಮಾವರದಲ್ಲೊಂದು ಬರ್ಬರ ಕೊಲೆ
ಉಡುಪಿ: ಅನೈತಿಕ ಸಂಬಂಧ ಪ್ರಶ್ನಿಸಿದ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿ ಕರ್ಜೆ ಗುಡ್ಡೆಯಂಗಡಿಯಲ್ಲಿ ನಿನ್ನೆ ನಡೆದಿದೆ. ಕೊಲೆಯಾದವನನ್ನು ಹೊಸೂರು ಗ್ರಾಮದ, ಉದ್ಕಳ್ಕ ನಿವಾಸಿ ನವೀನ್ ನಾಯ್ಕ್ ಎಂದು ಗುರುತಿಸಲಾಗಿದೆ.
ನವೀನ್ ಹತ್ಯೆಗೆ ಸಂಬಂಧಿಸಿದಂತೆ , ಅವರ ಪುತ್ರ ನಿತಿನ್ ನಾಯ್ಕ್ (15) ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕಳೆದ ಕೆಲವು ದಿನಗಳಿಂದ ನೆರೆಮನೆಯ ಮಹಿಳೆ ಮನೆಗೆ ಬರುತ್ತಿದ್ದ ಗೌತಮ್ ಈ ಕೃತ್ಯ ಎಸಗಿರಬಹುದು ಎಂದು ಆರೋಪಿಸಿದ್ದಾರೆ.
ಸರಸ್ವತಿ ಎಂಬವರ ಮನೆಗೆ ಮಲ್ಪೆಯ ಗೌತಮ್ ಎಂಬಾತ ಆಗಾಗ್ಗೆ ಭೇಟಿ ನೀಡುತ್ತಿದ್ದು. ಇದನ್ನು ನೋಡಿದ್ದ ಸ್ಥಳೀಯ ನಿವಾಸಿ ನವೀನ್ ನಾಯ್ಕ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅಲ್ಲದೆ ಇದೇ ವಿಚಾರಕ್ಕೆ 15 ದಿನಗಳ ಹಿಂದೆ ಗುಡ್ಡೆಯಂಗಡಿ ಕ್ರಾಸ್ಬಳಿ ಇಬ್ಬರ ನಡುವೆ ಗಲಾಟೆಯು ನಡೆದಿದೆ. ಗಲಾಟೆ ಬಳಿಕ ಸರಸ್ವತಿ ಅವರು ನವೀನ್ ನಾಯ್ಕ ಮನೆಗೆ ತೆರಳಿ ನಾನು ಗೌತಮ್ ಮದುವೆಯಾಗಲಿದ್ದೇವೆ. ನಮ್ಮ ವಿಚಾರದಲ್ಲಿ ಅಡ್ಡಬಂದಲ್ಲಿ ಗೌತಮ್ ನಿಮ್ಮನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರಂತೆ ಎಂದು ಆರೋಪಿಸಲಾಗಿದ್ದು, ತನ್ನ ಸಂಬಂಧಕ್ಕೆ ಅಡ್ಡಿಯಾಗಿದ್ದ ನವೀನ್ನನ್ನು ಪೂರ್ವದ್ವೇಷದಿಂದ ಗೌತಮ್ ಭಾನುವಾರ ರಾತ್ರಿ 6 ಜನರ ಸ್ನೇಹಿತರೊಂದಿಗೆ ಈ ಕೃತ್ಯ ಎಸಗಿದ್ದಾನೆ. ಆರೋಪಿಗಳನ್ನು ಘಟನೆ ನಡೆದ ಮೂರು ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ
You must be logged in to post a comment Login