LATEST NEWS
ಮಂಗಳೂರು – ಮೂಡಾ ಕಚೇರಿಯಲ್ಲಿ ನೇಣಿಗೆ ಶರಣಾದ ಸಿಬ್ಬಂದಿ…!!
ಮಂಗಳೂರು ಜೂನ್ 02 : ಮಂಗಳೂರು ಮೂಡಾದ ಸಿಬ್ಬಂದಿಯೊಬ್ಬ ಮೂಡಾ ಕಚೇರಿಯಲ್ಲೇ ನೇಣಿಗೆ ಶರಣಾದ ಘಟನೆ ನಗರದ ಉರ್ವಸ್ಟೋರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವನನ್ನು ಕೀರ್ತನ್ (35) ಎಂದು ಗುರುತಿಸಲಾಗಿದ್ದು. ಇವರು ದ್ವೀತೀಯ ದರ್ಜೆಯ ವಿಭಾಗೀಯ ಗುಮಸ್ಥರಾಗಿದ್ದ ಕೀರ್ತನ್ ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತಿದ್ದರು ಎನ್ನಲಾಗಿದೆ. ಆರು ತಿಂಗಳು ಅನಾರೋಗ್ಯ ನಿಮಿತ್ತ ರಜೆಯಲ್ಲಿದ್ದ ಕೀರ್ತನ್ ಮೂರು ತಿಂಗಳಿನಿಂದ ಕೆಲಸಕ್ಕೆ ಮರಳಿದ್ದರು,
ಆದ್ರೆ ಅನಾರೋಗ್ಯ ಆಗಾಗ ಬಾಧಿಸುತ್ತಿದ್ದರಿಂದ ಬೇಸತ್ತು ಇಂದು ಮಧ್ಯಾಹ್ನ 2:15 ಹೊತ್ತಿಗೆ ಮೂಡದ ಸ್ಟೋರ್ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಡದ ಸಿಬಂದಿ ಸ್ಟೋರ್ ರೂಮ್ ಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತನ್ ಶವ ಪತ್ತೆಯಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
You must be logged in to post a comment Login