KARNATAKA
ಮುಸ್ಲಿಂ ಸಹದ್ಯೋಗಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಬೆಂಗಳೂರು ಸೆಪ್ಟೆಂಬರ್ 19: ಮುಸ್ಲೀಂ ಸಹದ್ಯೋಗಿಯೊಬ್ಬರಿಗೆ ರಾತ್ರಿ ಸಂದರ್ಭ ಮನೆಗೆ ಡ್ರಾಪ್ ನೀಡಿದ್ದಕ್ಕೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಟಿಎಂ ಲೇಔಟ್ನ ಬ್ಯಾಂಕೊಂದರಲ್ಲಿ ಉದ್ಯೋಗಿಗಳು ಇವರು ಬ್ಯಾಂಕ್ ಕೆಲಸ ತಡವಾಗಿ ಮುಗಿಯಿತು ಎಂದು ಯುವತಿಯನ್ನು ಡ್ರಾಪ್ ಮಾಡಲು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಅದರಂತೆ ಯುವಕ ಮಹೇಶ್, ಮುಸ್ಲಿಂ ಯುವತಿಯನ್ನು ಡ್ರಾಪ್ ಮಾಡಲು ಹೋಗಿದ್ಧಾರೆ. ಆಗ ಮುಸ್ಲಿಂ ಯುವಕರ ಗುಂಪು ಇವರ ಮೇಲೆ ಹಲ್ಲೆ ನಡೆಸಿದೆ. ಮಹಿಳೆಯ ಮನೆಯವರ ಫೋನ್ ನಂಬರ್ ಪಡೆದು, ಅವರಿಗೂ ನಿಂದಿಸಿದ್ದಾರೆ. ಬೈಕ್ ಬಿಟ್ಟು ಆಟೋದಲ್ಲಿ ಮನೆಗೆ ಹೋಗುವಂತೆ ತಾಕೀತು ಕೂಡಾ ಮಾಡಿದ್ದಾರೆ.
You must be logged in to post a comment Login