LATEST NEWS
ಚುನಾವಣಾ ಪ್ರಚಾರದಲ್ಲಿ ಧಾರ್ಮಿಕ ಕೇಂದ್ರ ಗಳ ಭೇಟಿ ಇಲ್ಲ – ಪ್ರಧಾನಿ ಕಾರ್ಯಾಲಯ
ಚುನಾವಣಾ ಪ್ರಚಾರದಲ್ಲಿ ಧಾರ್ಮಿಕ ಕೇಂದ್ರ ಗಳ ಭೇಟಿ ಇಲ್ಲ – ಪ್ರಧಾನಿ ಕಾರ್ಯಾಲಯ
ಉಡುಪಿ ಮೇ 1: ಬಿಜೆಪಿಯ ಚುನಾವಣಾ ಪ್ರಚಾರಕ್ಕಾಗಿ ಉಡುಪಿ ಆಗಮನಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಪ್ರವಾಸವನ್ನು ಮಾಡುವುದಿಲ್ಲ ಎಂದು ಪ್ರಧಾನಿ ಕಚೇರಿಯಿಂದ ರಾಜ್ಯ ಮತ್ತು ಜಿಲ್ಲಾ ಬಿಜೆಪಿಗೆ ಸಂದೇಶ ರವಾನೆಯಾಗಿದೆ, ಈ ಹಿನ್ನಲೆಯಲ್ಲಿ ಬಿಜೆಪಿ ಸಮಾವೇಶಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಶ್ರೀಕೃಷ್ಣಮಠ ಮತ್ತು ದೇವಾಲಯಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮಠಕ್ಕೆ ಬರಬೇಕೆಂದು ನಾವು ಅಪೇಕ್ಷಿಸಿದ್ದೆವು, ಅಧಿಕೃತ ಪಟ್ಟಿಯಲ್ಲಿ ಮೋದಿ ಮಠ ಭೇಟಿ ಕಾರ್ಯಕ್ರಮ ಇಲ್ಲ. ಪ್ರಧಾನಿ ಕಾರ್ಯಾಲಯದ ತೀರ್ಮಾನವೇ ಅಂತಿಮ ಎಂದು ಉಡುಪಿ ಕಾರ್ಯಕ್ರಮದ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ಚುನಾವಣಾ ಪ್ರಚಾರ ಸಂದರ್ಭ ಚುನಾವಣಾ ಪ್ರಚಾರ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಾರೆ, ಮಠದ ಭೇಟಿಗೆ ಇನ್ನೊಂದು ದಿನ ಫಿಕ್ಸ್ ಮಾಡುತ್ತೇವೆ ಅಂತ ಹೇಳಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ ಮಠ ಭೇಟಿಯ ಕಾರ್ಯಕ್ರಮ ದಿಢೀರ್ ಫಿಕ್ಸ್ ಆಗ್ಬಹುದು ಎಂಬ ಹಿನ್ನೆಲೆಯಲ್ಲಿ ಕೃಷ್ಣಮಠಕ್ಕೆ ಟೈಟ್ ಸೆಕ್ಯೂರಿಟಿ ಕೊಡಲಾಗಿದೆ. ಪ್ರಧಾನಿ ಮಠ ಭೇಟಿ ಫಿಕ್ಸ್ ಆದ್ರೆ ರಥಬೀದಿ ಪ್ರವೇಶ ಬಂದ್ ಮಾಡಲಾಗುವುದು ಅಂತ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಥಬೀದಿಯಲ್ಲಿ ಬಿಎಸ್ಎಫ್, ಎಸ್ಎಸ್ಎಫ್ ಸಿಬ್ಬಂದಿ ಭಾರೀ ಭದ್ರತೆ ನಿಯೋಜಿಸಿದ್ದು, ರಾಜ್ಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
You must be logged in to post a comment Login