Connect with us

    LATEST NEWS

    ಜನ್ಮದಿನದ ಅಂಗವಾಗಿ ರಂಗೋಲಿಯಲ್ಲಿ ಅರಳಿ ಬಂದ ಪ್ರಧಾನಿ ನರೇಂದ್ರ ಮೋದಿ

    ಉಡುಪಿ ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಕ್ಕೆ ಉಡುಪಿಯಲ್ಲಿ ವಿಭಿನ್ನವಾಗಿ ಶುಭಾಶಯ ಕೋರಲಾಗಿದ್ದು, ಮೋದಿಯವರ ಭಾವಚಿತ್ರ ಇರುವ ರಂಗೋಲಿ ಬಿಡಿಸಿ ಪ್ರಧಾನಿಯವರಿಗೆ ಶುಭಾಷಯ ಕೋರಲಾಗಿದೆ.

    ಉಡುಪಿ ಜಿಲ್ಲೆಯ ಸಾಸ್ತಾನ ಚೆನ್ನಕೇಶವ ಹಾಲ್ ನಲ್ಲಿ ಈ ರಂಗೋಲಿಯನ್ನು ಬಿಡಿಸಲಾಗಿದ್ದು, ಚಿತ್ರ ಕಲಾವಿದೆ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ ಕೈ ಚಳಕದಲ್ಲಿ ಮೋದಿಯವರ ಭಾವಚಿತ್ರ ಮೂಡಿ ಬಂದಿದೆ.


    ಸುಮಾರು 12 ಅಡಿ ಎತ್ತರ 7.5 ಅಡಿ ಅಗಲವಾಗಿರುವ ಈ ರಂಗೋಲಿ ಬಿಡಿಸಲು ಕಲಾವಿದರು ಸುಮಾರು 15 ಗಂಟೆಗಳ ಕಾಲ ಶ್ರಮ ವಹಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕಾಗಿಯೇ ಸಿದ್ಧವಾದ ರಂಗೋಲಿ, ಸದ್ಯ ಎಲ್ಲರ ಕೇಂದ್ರ ಬಿಂದುವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply