LATEST NEWS
ನಾಗಪಾತ್ರಿ ಮನೆಯಲ್ಲಿ ಮೊಬೈಲ್ ಕಳ್ಳತನ.. ಸಿಸಿಟಿವಿ ಕ್ಯಾಮರಾ ದಾಖಲಾದ ಕಳ್ಳನ ಕೈಚಳಕ
ಉಡುಪಿ ಮಾರ್ಚ್ 16 : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಂಪಾರು ನಾಗಪಾತ್ರಿ ರವಿರಾಜ್ ಭಟ್ ರವರ ಮನೆಯಲ್ಲಿ ಬೆಳಗಿನ ಜಾವ ಆರು ಗಂಟೆಗೆ ಎರಡು ಮೊಬೈಲ್ ಗಳು ಕಳ್ಳತನವಾಗಿದೆ. ಕಳ್ಳತನದ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಅಂಪಾರಿನ ಪಾತ್ರಿಯವರ ಸ್ವಗೃಹದಲ್ಲಿ ನಾಗಮಂಡಲದ ಒಂದನೇ ವರ್ಷದ ವರ್ಧಂತಿ ಪ್ರಯುಕ್ತ ಯಕ್ಷಗಾನ ಸೇವೆ ಆಟ ಕಾರ್ಯಕ್ರಮ ಜರಗಿತ್ತು. ಬೆಳಗಿನ ಜಾವ ಆರು ಗಂಟೆಗೆ ಯಕ್ಷಗಾನದ ಗಣಪತಿ ಪೂಜೆ ಕಾರ್ಯಕ್ರಮದಲ್ಲಿ ಮನೆಯವರು ತೊಡಗಿಕೊಂಡಿದ್ದರು,
ಇದೇ ಸಮಯದಲ್ಲಿ ಕಳ್ಳರಿಬ್ಬರು ತಮ್ಮ ಕೈಚಳಕ ತೋರಿಸಿ ಮನೆಯ ಒಳಗಿದ್ದ ಎರಡು ಮೊಬೈಲನ್ನು ಕಳ್ಳತನಮಾಡಿ ಬೈಕ್ ಮೂಲಕ ಪರಾರಿಯಾಗಿದ್ದಾರೆ. ಇಬ್ಬರು ವ್ಯಕ್ತಿಗಳ ಮುಖಚಹರೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದು ವ್ಯಕ್ತಿಯ ಹುಡುಕಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.
You must be logged in to post a comment Login