Connect with us

    LATEST NEWS

    ನೆರೆ ಪೀಡಿತ ಪ್ರದೇಶ ನಾವುಂದಕ್ಕೆ ಭೇಟಿ ನೀಡಿ ದಿನಸಿ ಹಂಚಿದ ಶಾಸಕ ಸುಕುಮಾರ್ ಶೆಟ್ಟಿ

    ಕುಂದಾಪುರ ಜುಲೈ 10: ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು. ನೆರೆ ಪೀಡಿತವಾಗಿರುವ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಪ್ರದೇಶಕ್ಕೆ ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ದಿನಸಿಗಳನ್ನು ಹಂಚಿಕೆ ಮಾಡಿದ್ದಾರೆ.


    ನೆರೆ ಪೀಡಿತವಾಗಿರುವ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ಶಾಸಕ ಸುಕುಮಾರ್ ಶೆಟ್ಟಿ ಅವರ ವೈಯುಕ್ತಿಕವಾಗಿ ದಿನಸಿ ಹಂಚಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಸಿಇಒ ಪ್ರಸನ್ನ ಕುಮಾರ್, ಎಸಿ ರಾಜು ಆಗಮನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

    ಮನೆಯಲ್ಲಿ ವೃದ್ಧರು ಮಕ್ಕಳು ನಾಲ್ಕುದಿನಗಳಿಂದ ಹೊರಬರದ ಸ್ಥಿತಿಯಲ್ಲಿದ್ದಾರೆ, ದೋಣಿ, ಲೈಫ್ ಜಾಕೆಟ್ ಗಳನ್ನು ಪೂರೈಕೆ ಮಾಡಲಾಗಿದೆ. ಜನ ಆತಂಕಪಡುವ ಅಗತ್ಯ ಇಲ್ಲ. ನೆರೆಯ ಮಟ್ಟ ಬಹಳಷ್ಟು ಇಳಿಕೆ ಆಗುತ್ತಿದೆ. ಭತ್ತದ ಬೆಳೆ ನಾಶ ಆಗಿದ್ದಕ್ಕೆ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭರವಸೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply