Connect with us

    LATEST NEWS

    ಬೈಕಂಪಾಡಿ ಎಪಿಎಂಸಿಗೆ ಶಾಸಕ ಡಾ‌.ಭರತ್ ಶೆಟ್ಟಿ ದಿಢೀರ್ ಭೇಟಿ

    ಸುರತ್ಕಲ್ ಅಗಸ್ಟ್ 25 : ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿಯಲ್ಲಿಯೇ ವ್ಯಾಪಾರ ಮಾಡಲು ಬಯಸಿದ್ದಲ್ಲಿ ಎಲ್ಲಾ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಿ ರಾಜ್ಯದಲ್ಲಿಯೇ ಮಾದರಿ ಎಪಿಎಂಸಿ ಮಾಡಲಾಗುವುದು. ವ್ಯಾಪಾರಿಗಳು ಗೊಂದಲಕ್ಕೆ ಒಳಗಾಗದೆ ಇಲ್ಲಿಯೇ ವ್ಯಾಪಾರ ಮಾಡಲು ಮುಂದಾಗಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದ್ದಾರೆ.


    ಇಂದು ಬೆಳಿಗ್ಗೆ ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ ವರ್ತಕರೊಂದಿಗೆ ಮಾತನಾಡಿದರು. ಜನರ ತೆರಿಗೆ ಹಣವನ್ನು ಖರ್ಚು ಮಾಡುವಾಗ ನಾವು ಜಾಗ್ರತೆಯಿಂದ ಇರಬೇಕಾಗುತ್ತದೆ. ಆದ್ದರಿಂದ ಎಪಿಎಂಸಿಯಲ್ಲಿ ಆಗಬೇಕಾಗಿರುವ ಕೆಲವು ಅಭಿವೃದ್ಧಿಗಳಾದ ಪರ್ಯಾಯ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ ಹಾಗೂ ಕೋಲ್ಡ್ ಸ್ಟೋರೇಜ್ ಕೂಡ ಮಾಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ, ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಹಾಗೂ ಸಚಿವರೊಂದಿಗೆ ಮಾತನಾಡಿ ಸಮಾಲೋಚನೆ ನಡೆಸಲಾಗಿದೆ. ವರ್ತಕರು ಇಲ್ಲಿಯೇ ವ್ಯವಹಾರ ಮಾಡಲು ಬಯಸಿದ್ದಲ್ಲಿ ಜನರ ತೆರಿಗೆಯ ಹಣ ಬಳಸಿ ಕಾಮಗಾರಿ ಮಾಡಿದಾಗ ಆ ಹಣ ಕೂಡ ಸದುಪಯೋಗವಾಗುತ್ತದೆ ಎಂದು ಶಾಸಕರು ತಿಳಿಸಿದರು.


    ಶಾಸಕರೊಂದಿಗೆ ವರ್ತಕರ ಪ್ರತಿನಿಧಿ ರಾಘವ ಶೆಟ್ಟಿ, ಬಿಜೆಪಿ ವಕ್ತಾರ ಜಗದೀಶ್ ಶೇಣವ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಭರತರಾಜ್ ಕೃಷ್ಣಾಪುರ, ಪಾಲಿಕೆ ಸದಸ್ಯ ವರುಣ್ ಚೌಟ ಸಹಿತ ಸ್ಥಳೀಯ ಪ್ರಮುಖರು, ವರ್ತಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply