ಪುತ್ತೂರು ಎಪ್ರಿಲ್ 01: ಅಡುಗೆ ಅನಿಲ ಕೊರತೆ ಆತಂಕ ಬೇಡ ಎಂದು ಮಾಜಿ ಶಾಸಕರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲಿಯೂ ಕೂಡಾ ಗ್ಯಾಸ್ ಇಲ್ಲ. ಹಾಗಾಗಿ ಗ್ಯಾಸ್ ವಿಚಾರದಲ್ಲಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅನಿಲ ಕೊರತೆ ಆತಂಕ ಬೇಡ. ಮೋದಿ ನೇತೃತ್ವದಲ್ಲಿ ಸಮರ್ಪಕವಾಗಿ ಪೂರೈಕೆ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇವತ್ತು ಗ್ರಾಹಕರಿಗೆ 35 ರಿಂದ 40 ದಿನಕ್ಕೆ ಒಂದು ಸಿಲಿಂಡರ್ ಸಿಗುತ್ತಿದೆ. ನನಗೆ ಸುಳ್ಯದಲ್ಲಿ ಸ್ವತಃ ಗ್ಯಾಸ್ ಏಜೆನ್ಸಿ ಇದೆ. ನಮ್ಮಲ್ಲಿ 45 ದಿವಸಕ್ಕೆ ಗ್ಯಾಸ್ ಕೊಡುತ್ತೇವೆ. ನಮಗೆ ಲೋಡ್ ಬರದೆ 4 ದಿನ ಆಗಿದೆ. ಜನ ಅಂಗಡಿ ಎದುರು ಸರತಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಹೊಟೇಲ್ಗಳು ಬಂದ್ ಆಗಿದೆ. ಯಾವ ಹೊಟೇಲ್ನಲ್ಲಿ ಕೂಡಾ ಗ್ಯಾಸ್ ಇಲ್ಲ. ಉಪ್ಪಿನಂಗಡಿ ಕಂಬಳದ ಸಮಯ ಹೊಟೇಲ್ ಹಾಕಲು ನಾವು ಗ್ಯಾಸ್ ತೆಗೆಸಿಕೊಟ್ಟ ಬಳಿಕ ಅವರು ಹೊಟೇಲ್ ಮಾಡಿದರು. ಮೊನ್ನೆ ಮಾಜಿ ಶಾಸಕರು ಎಲ್ಲಿಯೂ ಗ್ಯಾಸ್ ಶಾರ್ಟೆಜ್ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಒಮ್ಮೆ ಹೇಳಿಕೆ ನೀಡಲಿ ನೋಡೋಣ. ಈ ಪರಿಸ್ಥಿತಿ ಎಲ್ಲಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿರುತ್ತಿದ್ದರೆ ಇಲ್ಲಿ ವಿರೋಧ ಪಕ್ಷದವರು ಹೆಗಲಿನಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ರೋಡ್ನಲ್ಲಿ ಓಡಾಡುತ್ತಿದ್ದರು. ಆದರೆ ಕಾಂಗ್ರೆಸ್ ನವರು ಚೀಪ್ ರಾಜಕೀಯ ಮಾಡಲು ಹೋಗುವುದಿಲ್ಲ ಎಂದರು