ಪುತ್ತೂರು ಡಿಸೆಂಬರ್ 06: ಬೆಳೆ ವಿಮೆ ಕುರಿತಂತೆ ಅಧಿಕಾರಿಗಳ ಜೊತೆ ಎರಡೆರಡು ಬಾರಿ ಮಾತನಾಡಿದ್ದು, ಈ ತಿಂಗಳ ಕೊನೆಗೆ ವಿಮೆ‌ ಹಣ ರೈತರ ಖಾತೆಗೆ ಬೀಳುವ ಸಾಧ್ಯತೆಯಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿದ ಅವರು ನವಂಬರ್ 30 ರ ಒಳಗೆ ಒಂದು ಹಂತದ ವಿಮಾ ಮೊತ್ತ ಪಾವತಿ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ಧರು, ಆದರೆ ಅದೂ‌ ಕೂಡಾ ಬಂದಿಲ್ಲ. ವಿಮೆ‌ ಹಣ ಪಾವತಿ ತಡವಾಗಲು ಸರಕಾರದ ಜಾತಿ ಗಣತಿ ಕಾರಣವಾಗಿದ್ದು, ಎಲ್ಲಾ‌ ಅಧಿಕಾರಿಗಳು ಜಾತಿ ಲೆಕ್ಕಾಚಾರದ ಹಿಂದೆ ಹೋದ ಕಾರಣ ತಡವಾಗಿದೆ. ಈ ಕಾರಣಕ್ಕೆ ದಾಖಲೆಗಳು ಸರಿಯಾಗಿ ಸಿಕ್ಕಿಲ್ಲ ಎನ್ನುವ ಕಾರಣ ಕೊಡುತ್ತಿದ್ದಾರೆ ಎಂದರು.

ಇನ್ನೂ ಈಗಾಗಲೇ ಕೊನೆಯ ಹಂತದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಿಮಾ ಕಂಪನಿಯವರು ಪುನರ್ ಪರಿಶೀಲನೆ ಮಾಡುತ್ತಿದೆ. ಆ ಕಾರಣಕ್ಕೆ ಕೊಂಚ ತಡವಾಗಿದೆ. ಅಲ್ಲದೆ ಸರಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

Share Information