Connect with us

    LATEST NEWS

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ

    ಮಂಗಳೂರು ಮೇ 8: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸಿದರು,ಮಂಗಳೂರು ನಗರದ ನವಭಾರತ ವೃತ್ತ, ನ್ಯೂಚಿತ್ರಾ, ರಥಬೀದಿಯಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿದರು. ಕಿಕ್ಕಿರಿದು ತುಂಬಿದ ರಥಬೀದಿಯಲ್ಲಿ ಅಮಿತ್ ಶಾ ಅವರ ರೋಡ್ ಶೋಗೆ ಅಭೂತಪೂರ್ವ ಜನಸ್ಪಂದನೆ ಸಿಕ್ಕಿತು.

    ಮಹಿಳೆಯರು, ಯುವಕ, ಯುವತಿಯರು ಹೂಮಳೆ ಸುರಿಸುವ ಮೂಲಕ ವಿಶಿಷ್ಟವಾಗಿ ಮಾಡಿದರು. ದಾರಿಯುದ್ದಕ್ಕೂ ಬರುವ ವಸತಿ ಸಮುಚ್ಚಯದ ಮೇಲೆ ನಿಂತ ನಾಗರಿಕರು ಅಲ್ಲಿಂದಲೇ ಹೂಮಳೆ ಸುರಿಸಿದರು.

    ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಮಂಗಳೂರು ನಗರ ದಕ್ಷಿಣದಲ್ಲಿ ವೇದವ್ಯಾಸ ಕಾಮತ್ ಅವರನ್ನು ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು. ವೇದವ್ಯಾಸ ಕಾಮತ್ ಅವರು ಯುವಕರಾಗಿದ್ದು, ದೂರದೃಷ್ಟಿ ಮತ್ತು ಸದಾ ಕಾರ್ಯಶೀಲತೆ ಹೊಂದಿರುವ ನಾಯಕರಾಗಿದ್ದಾರೆ. ಇವರನ್ನು ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಿ ಎಂದು ಅಮಿತ್ ಶಾ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply