Connect with us

    KARNATAKA

    ಹಾಸನದಲ್ಲಿ ಹಾಡಹಗಲೇ ಬಿಜೆಪಿ ನಾಯಕನ ಮನೆಗೆ ಪಿಸ್ತೂಲ್ ಹಿಡಿದು ನುಗ್ಗಿದ ದುಷ್ಕರ್ಮಿಗಳು

    ಹಾಸನ, ಆಗಸ್ಟ್ 23: ಜಿಲ್ಲೆಯ ಕೆ.ಆರ್‌ ಪುರಂನಲ್ಲಿ ಹಾಡಹಗಲೇ ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ ಕೈಯಲ್ಲಿ ಹಿಡಿದು ಬಿಜೆಪಿ ನಾಯಕನ ಮನೆಗೆ ನುಗ್ಗಿರುವ ಘಟನೆ ನಡೆದಿದೆ.

    ಬಿಜೆಪಿ ನಾಯಕ ಡಿ.ಟಿ.ಪ್ರಕಾಶ್ ಮನೆಗೆ ಇಬ್ಬರು ದುಷ್ಕರ್ಮಿಗಳು ಮಾಸ್ಕ್ ಧರಿಸಿ ಬಂದಿದ್ದು ಬೆಲ್‌ ಮಾಡಿದ್ದಾರೆ. ಆಗ ಮನೆಯಲ್ಲಿ ಅವರ ತಾಯಿ ಒಬ್ಬರೆ ಇದ್ದರು ಎಂದು ಹೇಳಲಾಗಿದೆ. ದುಷ್ಕರ್ಮಿಗಳು ಅವರಿಗೆ ಒಂದು ಪಾರ್ಸೆಲ್‌ ಎಂದು ರಂಗಮ್ಮ ಅವರಿಗೆ ಕವರ್ ಕೊಟ್ಟಿದ್ದಾರೆ.

    ಈ ವೇಳೆ ತಾಯಿಯಕುತ್ತಿಗೆಗೆ ಕೈಹಾಕಿ ಹಣೆಗೆ ಪಿಸ್ತೂಲ್ ಇಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಂಗಮ್ಮ ಜೋರಾಗಿ ಕಿರುಚಾಡಿದ್ದು, ಕೂಡಲೇ ಕಾಂಪೌಂಡ್ ಹಾರಿ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಹಾಸನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply