Connect with us

LATEST NEWS

ವಿದ್ಯಾರ್ಥಿನಿಯರ ಮೈಮುಟ್ಟಿ ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಬಿತ್ತು ಧರ್ಮದೇಟು..!!

ಮಂಗಳೂರು ಜನವರಿ 15: ವಿಧ್ಯಾರ್ಥಿನಿಯರ ಮೈಮುಟ್ಟಿ ಚುಡಾವಣೆ ಮಾಡಿ ವಿಕೃತ ಸಂತಸ ಪಡೆಯುತ್ತಿದ್ದ ಅಪ್ರಾಪ್ತ ಬಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ತೊಕ್ಕೊಟ್ಟು ಅಲೇಕಳದ ನಿವಾಸಿ 16 ವರ್ಷದ ಅಲ್ಪಸಂಖ್ಯಾತ ವರ್ಗದ ಅಪ್ರಾಪ್ತ ಹುಡುಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಾತ. ಕಳೆದ ಹಲವು ದಿನಗಳಿಂದ ಈತ ಬಂಡಿಕೊಟ್ಯದಲ್ಲಿ ಬೆಳಗ್ಗಿನ ಹೊತ್ತಲ್ಲಿ ಸ್ಕೂಟರಲ್ಲಿ ಸಂಚರಿಸುತ್ತಾ ದಾರಿಯಲ್ಲಿ ಹೋಗುವ ಕಾಲೇಜು, ಹೈಸ್ಕೂಲ್ ವಿದ್ಯಾರ್ಥಿನಿಯರ ಎದೆ ಮತ್ತು ಹಿಂಬಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಈತನ ಕಿರುಕುಳಕ್ಕೆ ಬೇಸತ್ತ ಯುವತಿಯರು ಹೆದರಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಉಳ್ಳಾಲ ಠಾಣೆಗೆ ಮೌಖಿಕ ದೂರನ್ನು ನೀಡಲಾಗಿತ್ತು, ಆದರೆ ಹುಡುಗ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ.

ಕೆಲವು ಹುಡುಗಿಯರು ಹುಡುಗನಿಗೆ ಚಪ್ಪಲಿ ತೋರಿಸಿದ್ದರೂ, ಯದ್ವಾತದ್ವಾ ಬೈದಿದ್ದರೂ ಅಪ್ರಾಪ್ತ ಯುವಕ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಇಂದು ಬೆಳಗ್ಗೆ ಯುವಕ ಬಂಡಿಕೊಟ್ಯದ ಅಯ್ಯಪ್ಪ ಮಂದಿರದ ಬಳಿ ತನ್ನ ಸ್ಕೂಟರ್ ನಲ್ಲಿ ಹುಡುಗಿಯೊಬ್ಬಳನ್ನು ಚುಡಾಯಿಸುವ ಯತ್ನದಲ್ಲಿಯೇ ಸ್ಥಳೀಯರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದ್ದು, ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Share Information

Continue Reading
Advertisement
Click to comment

Leave a Reply

Your email address will not be published. Required fields are marked *