Connect with us

    DAKSHINA KANNADA

    ಇಲ್ಯಾಸ್ ಹಂತಕರ ಜೊತೆಗೂ ಯು.ಟಿ.ಖಾದರ್ ಚಿತ್ರ, ಸಚಿವರ ನಡೆಯೇ ವಿಚಿತ್ರ ?

    ಇಲ್ಯಾಸ್ ಹಂತಕರ ಜೊತೆಗೂ ಯು.ಟಿ.ಖಾದರ್ ಚಿತ್ರ, ಸಚಿವರ ನಡೆಯೇ ವಿಚಿತ್ರ ?

    ಮಂಗಳೂರು, ಫೆಬ್ರವರಿ 27: ಮಂಗಳೂರು ಹಾಗೂ ಉಳ್ಳಾಲ ಪರಿಸರದಲ್ಲಿ ಗಾಂಜಾ ವ್ಯವಹಾರ, ಹನಿಟ್ರ್ಯಾಪ್ ಮೂಲಕ ಕುಖ್ಯಾತಿ ಮೂಲಕ ಟಾರ್ಗೆಟ್ ಗ್ರೂಪ್ ಹೆಸರು ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಈ ಗ್ರೂಪ್ ನ ಲೀಡರ್ಸ್ ಜೊತೆಗೆ ಸಚಿವ ಯು.ಟಿ.ಖಾದರ್ ಇದ್ದ ಫೋಟೊ ವೈರಲ್ ಆಗಿತ್ತು.

    ಇದೀಗ ಇತ್ತೀಚೆಗೆ ಹತ್ಯೆಯಾದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರ ಜೊತೆ ನಿಂತು ಸಚಿವ ಖಾದರ್ ತೆಗೆಸಿಕೊಂಡಿದ್ದ ಫೋಟೊ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದಾವೂದ್, ಸಮೀರ್ ಜೊತೆಗಿರುವ ಫೋಟೊ ಈಗ ವೈರಲ್ ಆಗಿದೆ. ಸಚಿವ ಯು.ಟಿ.ಖಾದರ್, ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ನಂಟು ಹೊಂದಿದ್ದಾರೆಂದು ಬಿಂಬಿಸಿ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ.

    ಕಳೆದ ಜನವರಿ 13ರಂದು ಇಲ್ಯಾಸನ್ನು ಮಂಗಳೂರಿನ ಫ್ಲಾಟ್ ಒಂದರಲ್ಲಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ, ಸಚಿವ ಖಾದರ್ ಆಪ್ತನೆಂದು ಬಿಂಬಿತನಾಗಿದ್ದ ಇಲ್ಯಾಸ್ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನೂ ಆಗಿದ್ದ.

    ಆನಂತರ ರೌಡಿಗಳ ನಡುವಿನ ದ್ವೇಷದಿಂದ ಹತ್ಯೆ ಆಗಿದ್ದರೂ, ಇದೀಗ ಆರೋಪಿಗಳ ಜೊತೆಗಿರುವ ಖಾದರ್ ಫೋಟೊ ಮತ್ತೆ ಸಂಚಲನ ಎಬ್ಬಿಸಿದೆ.

    ರಾಜಕೀಯ ಕಾರಣಕ್ಕಾಗಿ ಇತರ ಪಕ್ಷಗಳ ಮುಖಂಡರು ಆರೋಪಿಗಳ ಜೊತೆಗಿದ್ದ ಫೋಟೋಗಳ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವ ಸಚಿವ ಯು.ಟಿ.ಖಾದರ್ ಗೆ ತಾನೂ ಈ ರೀತಿಯ ಗೊಂದಲದಲ್ಲಿ ಸಿಕ್ಕಿ ಬೀಳುತ್ತೇನೆ ಎನ್ನುವುದು ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಗೊತ್ತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply