Connect with us

    BELTHANGADI

    ಸಚಿವ ಯು.ಟಿ ಖಾದರ್ ಧರ್ಮಸ್ಥಳ ಭೇಟಿ

    ಸಚಿವ ಯು.ಟಿ ಖಾದರ್ ಧರ್ಮಸ್ಥಳ ಭೇಟಿ

    ಬೆಳ್ತಂಗಡಿ ಜೂನ್ 11: ಸಮ್ಮಿಶ್ರ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಯು.ಟಿ. ಖಾದರ್‌ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

    ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನೂತನ ಸಚಿವರಾಗಿ ಆಯ್ಕೆಯಾದ ನಂತರ ಮೊದಲ ಭಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ ನೂತನ ಸಚಿವರನ್ನು ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್‌ ಸ್ವಾಗತಿಸಿದರು. ನಂತರ ಹೆಗ್ಗೆಡೆ ಅವರನ್ನು ಭೇಟಿ ಮಾಡಿದ ಸಚಿವ ಯು.ಟಿ ಖಾದರ್ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಖಾದರ್ ಅವರನ್ನು ಅಭಿನಂದಿಸಿದ ಡಾ. ಹೆಗ್ಗಡೆಯವರು, ತುಳುನಾಡಿನ ಘನತೆ, ಗೌರವ ಉಳಿಸುವ ರೀತಿಯಲ್ಲಿ ಹೆಚ್ಚು ಕೆಲಸ ನಿರ್ವಹಿಸಿ, ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡಿ. ಶ್ರೀ ಮಂಜುನಾಥ ಸ್ವಾಮಿ ನಿಮಗೆ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.

    ನಂತರ ಮಧ್ಯಮಗಳೊಂದಿಗೆ ಮಾತನಾಡಿದ ಅವರು ನಗರಾಭಿವೃದ್ದಿ ಮತ್ತು ವಸತಿ ಖಾತೆ ನನಗೆ ಹೊಸದಾದರೂ ಇಲಾಖೆಯ ವಿಚಾರ ತಿಳಿದುಕೊಂಡು ಇಲಾಖೆಯಲ್ಲಿ ಜನಸಾಮಾನ್ಯರಿಗೆ ಯಾವೆಲ್ಲ ಕೆಲಸ ಆಗಬೇಕೋ ಅದನ್ನು ಮಾಡುತ್ತೇನೆ. ಯಾವುದನ್ನೆಲ್ಲ ಸರಿಪಡಿಸಬೇಕೋ ಅದನ್ನೆಲ್ಲ ಸರಿಪಡಿಸುತ್ತೇನೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply