Connect with us

    DAKSHINA KANNADA

    ಏನೂ ಮಾಡಲಾಗದೆ ಇರುವ ಕಾಂಗ್ರೇಸ್ ಸುಮ್ಮನೆ ಕುಳಿತುಕೊಂಡರೆ ಉತ್ತಮ – ಸಚಿವ ಅಂಗಾರ

    ಪುತ್ತೂರು ಜನವರಿ 01: ಕಾಂಗ್ರೇಸ್ ಗೆ ಎಲ್ಲಾ ಅಭಿವೃದ್ದಿ ಕಾರ್ಯಗಳಿಗೂ ವಿರೋಧ ಮಾಡುವ ಚಾಳಿ ಬಂದಿದ್ದು,ಇದೀಗ ದೇವಸ್ಥಾನಗಳಿಗೆ ಸ್ವಾಯುತ್ತತೆ ನೀಡುವ ವಿಚಾರ ಕಾಂಗ್ರೇಸ್ ವಿರೋಧ ಮಾಡುತ್ತಿದೆ ಎಂದು ಸಚಿವ ಅಂಗಾರ ಆರೋಪಿಸಿದ್ದಾರೆ.


    ಪುತ್ತೂರಿನಲ್ಲಿ ಮಾತನಾಡಿದ ಅವರು ಕಾಂಗ್ರೇಸ್ 60 ವರ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಷ್ಟು ದೇವಸ್ಥಾನಗಳ‌ ಅಭಿವೃದ್ಧಿ ಮಾಡಿದೆ ಎನ್ನುವದನ್ನು ಅವರು ಮೊದಲು ತಿಳಿಸಲಿ,. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದೆ. ಹಿಂದೂ ಧಾರ್ಮಿಕ ಭಾವನೆಗಳನ್ನು ಅರ್ಥ ಮಾಡುವ ಕಾರ್ಯ ಬಿಜೆಪಿ ಸರಕಾರ ಮಾಡಿದೆ. ದೇವಸ್ಥಾನಗಳ ಸ್ವಾಯುತ್ತತೆ ವಿಚಾರದಲ್ಲಿ ಕಾಂಗ್ರೇಸ್ ರಾಜಕೀಯ ಮಾಡುತ್ತಿದೆ, ಕಾಂಗ್ರೇಸ್ ಈವರೆಗೂ ಒಳ್ಳೆ ಕೆಲಸ ಮಾಡಿಲ್ಲ, ಏನೂ ಮಾಡಲಾಗದೆ ಇರುವ ಕಾಂಗ್ರೇಸ್ ಸುಮ್ಮನೆ ಕುಳಿತುಕೊಂಡರೆ ಉತ್ತಮ ಎಂದು ಸಚಿವ ಎಸ್.ಅಂಗಾರ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply