
ಮಂಗಳೂರು ಡಿಸೆಂಬರ್ 10: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನ ಹಿನ್ನಲೆ ರಾಜ್ಯ ಸರಕಾರ ಡಿಸೆಂಬರ್ 11 ರಂದು ಸರಕಾರಿ ರಜೆ ಘೋಷಿಸಿದ್ದು, ಈ ಹಿನ್ನಲೆ ಬುಧವಾರ ನಡೆಯ ಬೇಕಿದ್ದ ಎಲ್ಲ ಪದವಿ ಪರೀಕ್ಷೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯವು ಮುಂದೂಡಿದೆ.

ಮುಂದೂಡಲಾದ ಪರೀಕ್ಷೆ ನಡೆಯುವ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





