Connect with us

    LATEST NEWS

    ಮಂಗಳೂರಿನಲ್ಲಿ ಮುಂದುವರೆದ ಟ್ಯಾಕ್ಸಿ ಡ್ರೈವರ್ಸ್ ಕಾಳಗ, ಮತ್ತೆ ಇಬ್ಬರಿಗೆ ಇರಿತ

    ಮಂಗಳೂರಿನಲ್ಲಿ ಮುಂದುವರೆದ ಟ್ಯಾಕ್ಸಿ ಡ್ರೈವರ್ಸ್ ಕಾಳಗ, ಮತ್ತೆ ಇಬ್ಬರಿಗೆ ಇರಿತ

    ಮಂಗಳೂರು, ನವೆಂಬರ್ 08 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ನಡೆದ ಓಲಾ ಕ್ಯಾಬ್ ಮತ್ತು ಟ್ಯಾಕ್ಸಿ ಡ್ರೈವರ್ ಗಳ ಹೊಡೆದಾಟ ಇಂದು ಕೂಡ ಮುಂದುವರೆದಿದೆ. 

    ಟ್ಯಾಕ್ಸಿ ಡ್ರೈವರ್ ಸರ್ಫಾಜ್ ಮತ್ತು ಸ್ಥಳೀಯ ನಿವಾಸಿ ಇಲ್ಯಾಸ್ ಗೆ ಅವರನ್ನು ಇನ್ನೊಂದು ಗುಂಪಿನ ಟ್ಯಾಕ್ಸಿ ಚಾಲಕರು ಚೂರಿಯಿಂದ ಇರಿದಿದ್ದಾರೆ.

    ಮಂಗಳೂರು ಹೊರ ವಲಯದ ಬಜ್ಪೆಯಲ್ಲಿ ಇಂದು ಸಂಜೆ ಈ ಕೃತ್ಯ ನಡೆದಿದೆ ಓಲಾ ಡ್ರೈವರ್ ರಶೀದ್ ಮತ್ತು ತೌಫಿಕ್ ವಾಮಂಜೂರು ಎಂಬವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

    ಚೂರಿ ಇರಿತದಿಂದ ತೀವ್ರ ಗಾಯಗೊಂಡ ಇಲ್ಯಾಸ್ ಮತ್ರು ಸರ್ಫಾಜ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ನಿನ್ನೆ ಓಲಾ ಕ್ಯಾಬ್ ಮತ್ತು ಟ್ಯಾಕ್ಸಿ ಡ್ರೈವರ್ ಗಳ ನಡುವೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಡೆದಾಟವಾಗಿತ್ತು.

    ಇದಕ್ಕೆ ಪ್ರತಿಕಾರವಾಗಿ ಈ ಚೂರಿ ಇರಿತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು. ಹಿರಿಯ ಪೊಲೀಸ್ ಅಧಿಕಾರಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಡಿಯೋ..

    Share Information
    Advertisement
    Click to comment

    You must be logged in to post a comment Login

    Leave a Reply