ಮಂಗಳೂರು ಡಿಸೆಂಬರ್ 09: ಆನ್ಲೈನ್ ನಲ್ಲಿ ನಕಲಿ ಹೂಡಿಕೆಯ ನಂಬಿ ವಿಧ್ಯಾರ್ಥಿಯೊಬ್ಬ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಆತನ ಉಳಿತಾಯದ ಹಣವನ್ನು ಕಳೆದುಕೊಂಡ ಮಂಗಳೂರಿನಲ್ಲಿ ನಡೆದಿದೆ.
ಪ್ರಸ್ತುತ ಹೋಮಿಯೂಪತಿ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಅದರೊಂದಿಗೆ ಪೌರೋಹಿತ್ಯವನ್ನು ಸಹ ಕಲಿಯುತ್ತಿದ್ದು ಪೂಜೆ, ಪುನಸ್ಕಾರ,ಹೋಮ ಹವನ ಮತ್ತು ಇನ್ನಿತರ ದೇವರ ಕೈಕರ್ಯಗಳಲ್ಲಿ ಸಹಾಯಕನಾಗಿ ಭಾಗಿಯಾಗಿ ಸೇವೆ ನಡೆಸಿಕೊಂಡಿರುತ್ತಾರೆ ಅದರಿಂದ ಬರುವ ಹಣವನ್ನು ಬ್ಯಾಂಕ್ ಒಂದರಲ್ಲಿ ಉಳಿತಾಯ ಮಾಡಿದ್ದಾನೆ.

ವಿಧ್ಯಾರ್ಥಿಗೆ ಕಳೆದ ನವೆಂಬರ್ 2025 ನೇ ಸಾಲಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್ ಆಪ್ ನಂಬ್ರ:8480413826 ನಿಂದ ಸಂದೇಶ ಕಳುಹಿಸಿ DBS trading ನ ಬಗ್ಗೆ ವಿವರಿಸಿ ಹಣ ಹೂಡಿಕೆ ಮಾಡಿ ಪ್ರತಿದಿನ ಶೇ.5 ರಿಂದ 10 ರಷ್ಟು ಲಾಭಾಂಶ ಗಳಿಸಬಹಿದೆಂದು ತಿಳಿಸಿರುತ್ತಾರೆ.ನಂತರ ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ 2025 ರ ಡಿಸೆಂಬರ್ ಅಂತ್ಯದೊಳಗೆ ಶೇ.800 ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿರುತ್ತಾರೆ.
ಇದರಿಂದ ಪಿರ್ಯಾದಿದಾರರು ಪ್ರೇರೇಪಿತರಾಗಿ ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದೆಂಬ ಇರಾದೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಹಣ ಹೂಡಿಕೆ ಮಾಡಲು ಮುಂದಾಗಿರುತ್ತಾರೆ.ಆರಂಭದಲ್ಲಿ ಪಿರ್ಯಾದಿದಾರರಿಗೆ Meena Bhat ಎಂಬ ಅಪರಿಚಿತ ಮಹಿಳೆ ಪಿರ್ಯಾದುದಾರರಿಗೆ ಮಾರ್ಗದರ್ಶಕಿಯಾಗಿದ್ದು ಪ್ರತಿದಿನ ನಿರಂತರವಾಗಿ ವಾಟ್ಸ್ ಆಪ್ ನಲ್ಲಿ ಸಂದೇಶ ಕಳುಹಿಸುತ್ತಾ ಹಣ ಹೂಡಿಕೆ ಮಾಡುವಂತೆ ಪ್ರೇರಪಣೆ ನೀಡುತ್ತಿದ್ದು ಸದ್ರಿ ಮಹಿಳೆಯ ವಾಟ್ಸ್ ಆಪ್ ನಂಬ್ರಗಳು:8456927877, 7208921697,7377950315,7326072641 ಮತ್ತು 9109693586 ಆಗಿರುತ್ತದೆ. ಅಂತೆಯೇ ಪಿರ್ಯಾದಿದಾರರಿಗೆ DBS trading ನ Managing Director ಆಗಿ Rajath Verma ಆಗಿರುತ್ತಾರೆ. ಸದ್ರಿಯವರ ವಾಟ್ಸ್ ಆಪ್ ನಂಬ್ರಗಳು: 8982913934, 8117014671, 9039806837 ಮತ್ತು 9339801928 ಆಗಿರುತ್ತದೆ. ಪಿರ್ಯಾದಿದಾರರು ಹಣ ಹೂಡಿಕೆ ಮಾಡಲು ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ UPI,IMPS & RTGS ಮುಖಾಂತರ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ದಿನಾಂಕ:05-11-2025 ರಿಂದ 26-11-2025 ರ ವರೆಗೆ ಹಂತ ಹಂತವಾಗಿ ಒಟ್ಟು 31,99,800/- ರೂ ಗಳನ್ನು ಪಿರ್ಯಾದಿದಾರರು ಬಾಬ್ತು ಕರ್ನಾಟಕ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿರುತ್ತಾರೆ. ನಂತರದ ದಿನಗಳಲ್ಲಿ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ವಾಪಾಸು ನೀಡುವಂತೆ ಸದ್ರಿ ಅಪರಿಚಿತ ವ್ಯಕ್ತಿಗಳಲ್ಲಿ ಕೇಳಿಕೊಂಡಾಗ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಹಾಗೂ ತೆರಿಗೆ ಇತರೆ ಶುಲ್ಕಗಳನ್ನು ಪಾವತಿಸುವಂತೆ ಇಲ್ಲವಾದಲ್ಲಿ ಯಾವುದೇ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ.ಪಿರ್ಯಾದಿದಾರರು ಈಗಾಗಲೇ ತಮ್ಮ ಎಲ್ಲಾ ಉಳಿತಾಯದ ಹಣ ಮತ್ತು ಮನೆಯಲ್ಲಿದ್ದ ಬಂಗಾರವನ್ನೆಲ್ಲಾ ಬ್ಯಾಂಕಿನಲ್ಲಿ ಅಡಮಾನ ಇರಿಸಿ ಸಾಲ ತೆಗೆದು ಎಲ್ಲಾ ಹಣವನ್ನು ಅಪರಿಚಿತ ವ್ಯಕ್ತಿ ತಿಳಿಸಿದಂತೆ ವರ್ಗಾಯಿಸಿರುತ್ತಾರೆ.ಆದರೆ ಪಿರ್ಯಾದಿದಾರರು ಹೂಡಿಕೆ ಮಾಡಿದ ಯಾವುದೇ ಹಣ ಮತ್ತು ಲಾಭಾಂಶ ದೊರಕದಿದ್ದಾಗ ಪಿರ್ಯಾದಿದಾರರು ಭಯಬೀತರಾಗಿ ತಮ್ಮ ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿರುತ್ತದೆ.



