LATEST NEWS
ಅಪ್ಪನ ಗುಂಡೇಟಿನಿಂದ ಮೆದುಳು ನಿಷ್ಕ್ರೀಯಗೊಂಡು ಕೋಮಾದಲ್ಲಿ ಬಾಲಕ ಸುಧೀಂದ್ರ ಇನ್ನಿಲ್ಲ…!!
ಮಂಗಳೂರು ಅಕ್ಟೋಬರ್ 08: ಅಪ್ಪನ ಕ್ಷಣಿಕ ಸಿಟ್ಟಿಗೆ ಗುಂಡೇಟು ತಗುಲಿ ಮದುಳು ನಿಷ್ಕ್ರೀಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಇಂದು ಬೆಳಿಗ್ಗೆ ಸಾವನಪ್ಪಿದ್ದಾನೆ.
ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಕೈಯಿಂದಲೇ ಹಾರಿದ್ದ ಪಿಸ್ತೂಲ್ ಗುಂಡಿನಿಂದಾಗಿ ತೀವ್ರ ಗಾಯಗೊಂಡು ಎರಡು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ 16 ವರ್ಷ ದ ಮಗ ಸುಧೀಂದ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅ.5 ರಂ ದು ಸಂಜೆ ಮೋರ್ಗನ್ ಗೇಟ್ ನಲ್ಲಿರುವ ವೈಷ್ಣವಿ ಸಂಸ್ಥೆಯ ಕಚೇರಿಯ ಹೊರಗಡೆ ಘಟನೆ ನಡೆದಿತ್ತು.
ಸಂಬಳ ಕೇಳಲು ಬಂದಿದ್ದ ಇಬ್ಬರು ನೌಕರರ ಮೇಲಿನ ಸಿಟ್ಟಿನಲ್ಲಿ ರಾಜೇಶ ಪ್ರಭು ತನ್ನ ಪಿಸ್ತೂ ಲ್ ತೆಗೆದು ಬೆದರಿಸುವ ಸಂದರ್ಭ ಹಾರಿದ ಗುಂಡು ಅವರ ಮಗನ ತಲೆಗೆ ಬಿದ್ದಿತ್ತು. ಗುಂಡೇಟಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮರುದಿನ ಆತನ ಮೆದುಳು ನಿಷ್ಕ್ರಿಯಗೊಂಡ ವಿಷಯವನ್ನು ವೈದ್ಯರು ಘೋಷಿಸಿದ್ದರು. ಶುಕ್ರವಾರ ನಸುಕಿನಜಾವ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ತಂದೆ ರಾಜೇಶ್ ಪ್ರಭು ಅವರನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
You must be logged in to post a comment Login