LATEST NEWS
ಅನಂತ್ ಸಾವಿನಲ್ಲೂ ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಪೇಜ್
ಅನಂತ್ ಸಾವಿನಲ್ಲೂ ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಪೇಜ್
ಮಂಗಳೂರು , ನವೆಂಬರ್ 12 : ಇಂದು ನಿಧನರಾದ ಕೆಂದ್ರ ಸಚಿವ ಅನಂತ್ ಕುಮಾರ್ ಸಾವಿನಲ್ಲೂ ವಿಕೃತ ಮನಸ್ಸಿನವರು ವಿಕೃತಿ ಮೆರೆದಿದ್ದಾರೆ.
ಮಂಗಳೂರು ಮುಸ್ಲಿಂ ಪೇಜ್ ಫೇಸ್ ಬುಕ್ ಪೇಜ್ ನಲ್ಲಿ ಈ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದಾರೆ.
ಫೇಸ್ ಬುಕ್ ಪೇಜ್ನಲ್ಲಿ ಅನಂತ್ ಕುಮಾರ್ ಬಗ್ಗೆ ಅವಹೇಳನ ಕಾರಿ ಬರಹ ಪ್ರಕಟಿಸಿದ ಮಂಗಳೂರು ಫೇಸ್ ಬುಕ್ ಪೇಜ್ ನಲ್ಲಿ ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತಕುಮಾರ್ ಮೇಲೆ ಹೋಗಿ ಯೂ ಜಾತಿ ವಿಷ ಬಿತ್ತ ಬೇಡ ಎಂದು ಬರೆದು ಮುಸ್ಲಿಂ ಪೇಜ್ ನ ವಿಕೃತ ಮನಸ್ಸುಗಳು ವಿಕೃತಿ ಮೆರೆದಿದ್ದಾರೆ.
ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿ ಕೊಂಡ ಕೋಮುವಾದಿ ಅನಂತ ಕುಮಾರ್ ಎಂದು ಅವಹೇಳಕಾರಿ ಪೋಸ್ಟನ್ನು ಕೂಡ ಪ್ರಕಟಿಸಲಾಗಿದೆ.
ಜೊತೆಗೆದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದು ಪೋಸ್ಟ್ ಹಾಕಲಾಗಿದೆ.
ಸಾವಿನಲ್ಲೂ ವಿಕೃತಿ ಮೆರೆದ ವಿಕೃತ ಮನಸ್ಸಿನ ಕಟುಕರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಅವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
You must be logged in to post a comment Login