Connect with us

LATEST NEWS

ಮಂಗಳೂರಿನ ಈ ಎಂಜಿನಿಯರ್ ಗೆ ಶುಭಾಶಯವಿಲ್ಲ….!!

Share Information

ಮಂಗಳೂರು ಸೆಪ್ಟೆಂಬರ್ 16: ಪ್ರಧಾನಿ ಮೋದಿ ಬಂದ ಸಂದರ್ಭ ಮಂಗಳೂರಿನ ಕೂಳೂರು ಸೇತುವೆಗೆ ಹಾಕಿದ ಡಾಂಬರ್ ಕಿತ್ತು ಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಮೀಮ್ಸ್ ಗಳು ಹರಿದಾಡುತ್ತಿದ್ದು, ಇದೀಗ ಎಂಜಿನಿಯರ್ಸ್ ಡೇ ದಿನದ ಶುಭಾಶಯ ಹೇಳುವಾಗ ಕೂಳೂರು ಸೇತುವೆಗೆ ಡಾಂಬರು ಹಾಕಿಸಿದ ಎಂಜಿನಿಯರ್ ಒಬ್ಬರನ್ನು ಬಿಟ್ಟು ಉಳಿದ ಎಲ್ಲ ಎಂಜಿನಿಯರ್‌ಗಳಿಗೆ ಎಂಜಿನಿಯರ್ಸ್‌ ದಿನದ ಶುಭಾಶಯಗಳು’ ಎಂಬ ಸಂದೇಶವೊಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳ ಮುಚ್ಚಲು ಹಾಕಿದ್ದ ಡಾಂಬರು ಹತ್ತೇ ದಿನಗಳಲ್ಲಿ ಕಿತ್ತುಹೋಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿ, ಮತ್ತೆ ದುರಸ್ತಿ ಕಾರ್ಯ ನಡೆದಿದೆ. ಸಾರ್ವಜನಿಕರೊಬ್ಬರು ಅದನ್ನು ಉಲ್ಲೇಖಿಸಿ ಎಂಜಿನಿಯರ್ಸ್‌ ದಿನದ ಶುಭಾಶಯಗಳನ್ನು ಈ ರೀತಿ ವಿಭಿನ್ನವಾಗಿ ಕೋರಿದ್ದಾರೆ. ಕೆಲ ವರ್ಷಗಳ ಹಿಂದೆ ಪಂಪ್‌ವೆಲ್‌ ಮೇಲ್ಸೇತುವೆಯ ಕಾಮಗಾರಿಯ ಎಂಜಿನಿಯರ್‌ ಅನ್ನು ಉಲ್ಲೇಖಿಸಿ ಇದೇ ರೀತಿ ಶುಭಾಶಯ ಕೋರಲಾಗಿತ್ತು.


Share Information
Advertisement
Click to comment

You must be logged in to post a comment Login

Leave a Reply