KARNATAKA
ಜೈಶ್ರೀರಾಮ್ ಘೋಷಣೆ ವೇಳೆ ಅಲ್ಲಾವು ಅಕ್ಬರ್ ಎಂದು ಕೂಗಿದ ವಿಧ್ಯಾರ್ಥಿನಿ
ಮಂಡ್ಯ : ಹಿಜಬ್ ಜ್ವಾಲೆ ಇಡೀ ರಾಜ್ಯಕ್ಕೆ ಹಬ್ಬಿದ್ದು ಹಲವು ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಈ ನಡುವೆ ಮಂಡ್ಯದಲ್ಲೂ ಹಿಜಬ್ vs ಕೇಸರಿ ವಿವಾದ ಜೊರಾಗಿದ್ದು, ಪಿಇಎಸ್ ಪದವಿ ಕಾಲೇಜಿಗೆ ಮಂಗಳವಾರ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದಿದ್ದು, ಬುರ್ಖಾ ಧರಿಸಿ ಬಂದಿದ್ದ ವಿಧ್ಯಾರ್ಥಿನಿ ಎದುರು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಇದರಿಂದ ಪ್ರಚೋದನೆಗೆ ಒಳಗಾದ ವಿದ್ಯಾರ್ಥಿನಿ ಸಹ ಅಲ್ಲಾವು ಅಕ್ಬರ್ ಎಂದು ಘೋಷಣೆ ಕೂಗಿದರು. ನಂತರ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಕೂಗು ಜೋರಾಯಿತು. ವಿದ್ಯಾರ್ಥಿನಿಯೂ ಘೋಷಣೆ ಮುಂದುವರಿಸಿದರು.
‘ಬುರ್ಖಾ ತೆಗೆಯಿರಿ ಎಂದು ಹೇಳಲು ಅವರು ಯಾರು, ಅವರಿಗೆ ಏನು ಹಕ್ಕಿದೆ’ ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ವಿದ್ಯಾರ್ಥಿಗಳು ಆಕೆಯತ್ತ ನುಗ್ಗಿ ಬಂದರು. ತಕ್ಷಣವೇ ಎಚ್ಚೆತ್ತುಕೊಂಡ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳ ಗುಂಪು ತಡೆದರು.
You must be logged in to post a comment Login