LATEST NEWS
ಕರ್ತವ್ಯ ನಿರತ ಪೊಲೀಸರ ಮೇಲೆ ವಾಹನ ಹತ್ತಿಸಿದ ವ್ಯಕ್ತಿ
ಕರ್ತವ್ಯ ನಿರತ ಪೊಲೀಸರ ಮೇಲೆ ವಾಹನ ಹತ್ತಿಸಿದ ವ್ಯಕ್ತಿ
ಮಂಗಳೂರು ಎಪ್ರಿಲ್ 23: ಲಾಕ್ ಡೌನ್ ಹಿನ್ನಲೆ ವಾಹನ ತಪಾಸಣೆ ನಿರತ ಪೊಲೀಸರ ಮೇಲೆ ವಾಹನ ಸವಾರನೊಬ್ಬ ವಾಹನ ಹತ್ತಿಸಿದ ಘಟನೆ ಮಂಗಳೂರಿನ ಬಿಜೈ ಎಂಬಲ್ಲಿ ನಡೆದಿದೆ.
ಲಾಕ್ ಡೌನ್ ಹಿನ್ನಲೆ ವಾಹನ ತಪಾಸಣೆಗೆ ಮಂಗಳೂರಿನ ಬಿಗ್ ಬಜಾರ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಆರೋಪಿ ಸಾಧಾಕತ್ ವಾಹನವನ್ನು ಪೊಲೀಸರು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಆರೋಪಿ ವಾಹನ ನಿಲ್ಲಿಸದೇ ಪೊಲೀಸರ ಮೇಲೆಯೇ ವಾಹನ ಹತ್ತಿಸಿದ್ದಾನೆ.
ಈ ಘಟನೆಯಲ್ಲಿ ಟ್ರಾಫಿಕ್ ಎಎಸ್ಐ ಸೂರಜ್ ಕುಮಾರ್ ಗೆ ಸಣ್ಣಪುಟ್ಟ ಗಾಯವಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ರ ಮೇಲೆ ವಾಹನ ಚಲಾಯಿಸಿದ್ದಕ್ಕೆ ಆರೋಪಿ ಸಾಧಾಕತ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login