Connect with us

    LATEST NEWS

    ಮಾರಕಾಸ್ತ್ರಗಳಿಂದ ಕಡಿದು ಯುವಕನ ಕೊಲೆ ಮಾಡಿದ ರೌಡಿ ಶೀಟರ್…!

    ಮಾರಕಾಸ್ತ್ರಗಳಿಂದ ಕಡಿದು ಯುವಕನ ಕೊಲೆ ಮಾಡಿದ ರೌಡಿ ಶೀಟರ್…!

    ಬೆಳ್ತಂಗಡಿ ಜನವರಿ 25: ವ್ಯಕ್ತಿಯೋರ್ವನನ್ನು ರೌಡಿ ಶೀಟರ್ ಇರಿದು ಕೊಲೆ ಮಾಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

    ಗುರುವಾಯನಕೆರೆ ಸಮೀಪದ ಪೊಯ್ಯೆಗುಡ್ಡೆ ನಿವಾಸಿ ರಮೇಶ್ ಸಾವಿಗೀಡಾದ ವ್ಯಕ್ತಿಯಾಗಿದ್ದು, ರೌಡಿ ಶೀಟರ್ ಅಣ್ಣು ಎಂಬಾತ ಈತ ಕೃತ್ಯ‌ ನಡೆಸಿದ್ದಾನೆ. ಆರೋಪಿಯ‌ನ್ನು ಬೆಳ್ತಂಗಡಿ ಪೋಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ಹತ್ಯೆಗೀಡಾದ ವ್ಯಕ್ತಿ ಹಾಗೂ ರೌಡಿ ಅಣ್ಣು ನಡುವೆ ಯಾವ ರೀತಿಯ ವೈಷ್ಯಮ್ಯವಿತ್ತು ಎನ್ನುವ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ. ಕೊಲೆ ಮಾಡಿದ ರೌಡಿ ಅಣ್ಣು ಇಡೀ ಗುರುವಾಯನಕೆರೆ ಪರಿಸರದಲ್ಲಿ ಕುಖ್ಯಾತನಾಗಿದ್ದು, ಈತನ ವಿರುದ್ಧ ಹಲ್ಲೆ, ಕಳ್ಳತನ ಮೊದಲಾದ ಹಲವು ಪ್ರಕರಣಗಳು ದಾಖಲಾಗಿವೆ.

    ಈತನ ಉಪಟಲ ತಾಳಲಾರದೆ ನಾಲ್ಕೈದು ವರ್ಷಗಳ ಹಿಂದೆ ಊರಿನ ಜನರೆಲ್ಲಾ ಸೇರಿ ಈತನಿಗೆ ಹಲ್ಲೆ ನಡೆಸಿ ಊರಿಂದಲೇ ಓಡಿಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರು ಜೈಲಿನಲ್ಲೂ ತನ್ನ ಪುಡಿ ಗ್ಯಾಂಗ್ ಕಟ್ಟಿಕೊಂಡಿರುವ ಈತ ಇದೀಗ ಕೊಲೆ ಮಾಡುವ ಮೂಲಕ ಮತ್ತೆ ಸುದ್ಧಿಯಾಗಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply