ಕಾಸರಗೋಡು ಡಿಸೆಂಬರ್ 26: ಶಬರಿಮಲೆಗೆ ತೆರಳುತ್ತಿದ್ದ ವೇಳೆ ಹಾರ್ಟ್ ಅಟ್ಯಾಕ್ ನಿಂದ ಅಸ್ವಸ್ಥಗೊಂಡಿದ್ದ ಚೆನ್ನೈನ ಭಕ್ತರೊಬ್ಬರಿಗೆ ಕನ್ನಡಿಗನೊಬ್ಬ ಸಿಪಿಆರ್ ಮಾಡಿ ಜೀವ ಉಳಿಸಿದ ಘಟನೆ ನಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.

ಶಬರಿಮಲೆ ಯಾತ್ರೆ ಸಂದರ್ಭ ಚೆನ್ನೈಯ ಮಾಲಾಧಾರಿಯೊಬ್ಬರಿಗೆ ಹೃದಯಾಘಾತವಾಗಿತ್ತು, ತತ್ಕ್ಷಣ ಕರ್ನಾಟಕದ ಗೋಕಾಕದ ಹೊಟೇಲ್ ಉದ್ಯಮಿ ಪ್ರಭಾಕರ ಶೆಟ್ಟಿ ಅವರು ಸಿಪಿಆರ್ (Cardio pulmonary resuscitation) ನಡೆಸುವ ಮೂಲಕ ಜೀವ ಉಳಿಸಿದ್ದಾರೆ. ಈ ಕುರಿತಾದ ವೀಡಿಯೋವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಅಯ್ಯಪ್ಪ ಸನ್ನಿಧಾನ ಯಾತ್ರೆ ಸಂದರ್ಭ ಕಾಡು ದಾರಿಯಲ್ಲಿ ಸ್ಮೃತಿ ತಪ್ಪಿದ ಅಯ್ಯಪ್ಪ ವ್ರತಧಾರಿಗೆ ಕರ್ನಾಟಕದ ಓರ್ವ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ.



