UDUPI
ಕಾಲು ಜಾರಿ ನಿರ್ಮಾಣ ಹಂತದ ಬಾವಿಗೆ ಬಿದ್ದು ವಿವಾಹಿತ ಸಾವು
ಉಡುಪಿ ಜೂನ್ 13: ಕಾಲು ಜಾರಿ ನಿರ್ಮಾಣ ಹಂತದ ಬಾವಿಗೆ ಬಿದ್ದು ವಿವಾಹಿತನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡಾ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 38 ವರ್ಷದ ಲಕ್ಷ್ಮಣ್ ಪೂಜಾರಿ ಎಂದು ಗುರುತಿಸಲಾಗಿದೆ. ಕುಂದಾಪುರ ತಾಲ್ಲೂಕಿನ ಕರ್ಕುಂಜೆ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಬಾವಿ ಕೆಲಸ ಮಾಡುವಾಗ ಬಂದ ಭಾರಿ ಮಳೆಯ ಕಾರಣ ಬಾವಿ ಕುಸಿದಿದ್ದು, ಸ್ಥಳದಲ್ಲೇ ಇದ್ದ ಲಕ್ಷ್ಮಣ್ ಪೂಜಾರಿ ಕಾಲು ಜಾರಿ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ತಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಬಾವಿಗಿಳಿದು ಶವ ಮೇಲೆಕ್ಕೆತ್ತಿದ್ದಾರೆ,ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
You must be logged in to post a comment Login