Connect with us

    BELTHANGADI

    ಲಕ್ಷಾಂತರ ಮೌಲ್ಯದ ಮರ ಸಾಗಾಟ ಓರ್ವನ ಬಂಧನ

    ಲಕ್ಷಾಂತರ ಮೌಲ್ಯದ ಮರ ಸಾಗಾಟ ಓರ್ವನ ಬಂಧನ

    ಬೆಳ್ತಂಗಡಿ ಅಕ್ಟೋಬರ್ 26: ಬೆಳ್ತಂಗಡಿಯ ಪುದುವೆಟ್ಟು ಅರಣ್ಯದಿಂದ ಅಕ್ರಮವಾಗಿ ಮರಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಓರ್ವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಬಂಧಿತನನ್ನು ಅಬ್ಬಾಸ್ ಎಂದು ಗುರುತಿಸಲಾಗಿದೆ. ಈತ ಬೆಳ್ತಂಗಡಿಯ ಪುದುವೆಟ್ಟು ಅರಣ್ಯದಿಂದ ಮರ ಕದ್ದು ಸಾಗಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

    ಬಂಧಿತ ಅಬ್ಬಾಸ್ ನಿಂದ ಲಕ್ಷಾಂತರ ಮೌಲ್ಯದ ಬೀಟಿ, ಹಾಗೂ ಸಾಗುವಾಣಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ. ಮರ ಸಾಗಾಟಕ್ಕೆ ಬಳಸಿದ್ದ ಕಾರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ವಾಹನದಲ್ಲಿ ಕತ್ತಿ, ಗರಗಾಸು ಹಾಗೂ ಇತರ ಆಯುಧಗಳು ಪತ್ತೆ ಯಾಗಿವೆ.

    Share Information
    Advertisement
    Click to comment

    You must be logged in to post a comment Login

    Leave a Reply