LATEST NEWS
ಮಲ್ಪೆ ಬೀಚ್ ಗೆ ಸುರಕ್ಷತಾ ಬೇಲಿ…ನೀರಿಗಳಿದರೆ ದಂಡ
ಉಡುಪಿ ಜೂನ್ 09: ಮಳೆಗಾಲದ ಹಿನ್ನಲೆ ಸಮುದ್ರ ಪ್ರಕ್ಷುಬ್ದವಾಗಿದ್ದು, ಪ್ರವಾಸಿಗರು ಸಮುದ್ರಕ್ಕೆ ಈಜಲು ತೆರಳಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ಹಿನ್ನಲೆ ಮಲ್ಪೆ ಬಂದರು ಅಭಿವೃದ್ಧಿ ಸಮಿತಿಯು ಬೀಚ್ನ ಪ್ರಮುಖ ಪ್ರದೇಶದಲ್ಲಿ ಸುರಕ್ಷತಾ ಬಲೆ ಎಳೆಯಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ತಡೆಯಲು ಬಲೆಗಳನ್ನು ಹಾಕಲಾಗುತ್ತಿದೆ.
ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಸಮುದ್ರಕ್ಕೆ ಇಳಿದು ಈಜಲು ತೆರಳಿ ನೀರು ಪಾಲಾದ ಘಟನೆಗಳು ಹೆಚ್ಚಾಗಿದೆ. ಈ ಹಿನ್ನಲೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ನೀರಿಗೆ ಪ್ರವಾಸಿಗರ ಇಳಿಯುವುದನ್ನು ನಿರ್ಬಂಧಿಸಲು ಜಿಲ್ಲಾಡಳಿತ ಮುಂದಾಗಿದೆ. ಮಲ್ಪೆ ಕಡಲತೀರದ ಪ್ರಮುಖ ಪ್ರದೇಶಗಳಲ್ಲಿ ಒಂದು ಕಿ.ಮೀ. ಉದ್ದದ ಆರು ಅಡಿ ಎತ್ತರದ ಬಲೆಯನ್ನು ಎಳೆಯಲಾಗಿದೆ. ಮುಂಬರುವ ಅಪಾಯದ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಕೆಂಪು ಧ್ವಜಗಳನ್ನು ಸಹ ಹಾಕಲಾಗಿದೆ. ಬಲೆ ದಾಟಿ ನೀರಿಗೆ ಕಾಲಿಟ್ಟವರು 500 ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಸಮಿತಿ ಮೂಲಗಳು ತಿಳಿಸಿವೆ.
ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಸಾರ್ವಜನಿಕ ವಿಳಾಸ ವ್ಯವಸ್ಥೆ ಕೂಡ ಜಾರಿಯಲ್ಲಿದೆ. ಪ್ರವಾಸಿಗರಿಗೆ ಸುರಕ್ಷಿತ ಸ್ಥಳ ಎಂದು ಸೂಚಿಸುವ ಹಳದಿ ಧ್ವಜಗಳನ್ನು ಕೆಲವು ಸ್ಥಳಗಳಲ್ಲಿ ಇರಿಸಲಾಗಿದೆ.
You must be logged in to post a comment Login