LATEST NEWS
ಪ್ರಧಾನಿ ನರೇಂದ್ರ ಮೋದಿಯವರ ಕಳಂಕ ರಹಿತ ಆಡಳಿತ ಕಾಂಗ್ರೇಸ್ ನ ಬುಡ ಅಲ್ಲಾಡಿಸಿದೆ – ಶಾಸಕ ವೇದವ್ಯಾಸ್ ಕಾಮತ್
ಪ್ರಧಾನಿ ನರೇಂದ್ರ ಮೋದಿಯವರ ಕಳಂಕ ರಹಿತ ಆಡಳಿತ ಕಾಂಗ್ರೇಸ್ ನ ಬುಡ ಅಲ್ಲಾಡಿಸಿದೆ – ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಎಪ್ರಿಲ್ 15: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ ಐದು ವರ್ಷಗಳ ಕಳಂಕ ರಹಿತ ಆಡಳಿತ ಕಾಂಗ್ರೇಸ್ ನ ಬುಡ ಅಲ್ಲಾಡಿಸಿದ್ದು, ಕಾಂಗ್ರೇಸಿಗೆ ಒಬ್ಬ ಚೌಕಿದಾರನನ್ನೇ ಸಂಭಾಳಿಸಲಾಗುತ್ತಿಲ್ಲ,ಈಗ ಇಡೀ ದೇಶವೇ ನಾನೂ ಚೌಕಿದಾರ್ ಎನ್ನುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಗರದ ಉರ್ವ ದೇರೆಬೈಲ್ ನೈರುತ್ಯ ವಾರ್ಡ್ ಬಿಜೆಪಿ ಕೈಗೊಂಡಿದ್ದ ಮೈ ಭಿ ಚಾಕಿದಾರ್ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು ಕಳೆದ ಬಾರಿ ಯುಪಿಎ ಸರಕಾರವು ಭಾರತವನ್ನು ಲೂಟಿಗೈದು ಆಂತರಿಕ ಸಂಪತ್ತನ್ನೇಲ್ಲಾ ಹಂಚಿಕೊಂಡಿದ್ದರು.ಈಗ ನರೇಂದ್ರ ಮೋದಿಜೀ ಅವರು ಲೂಟಿಕೋರರ ಜುಟ್ಟು ಹಿಡಿದಿದ್ದು, ಕಳೆದು ಹೋದ ರಾಷ್ಟ್ರದ ಸಂಪತ್ತು ಮರಳಿ ತರುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಕಾಂಗ್ರೇಸ್ ಪ್ರಜಾಪ್ರಭುತ್ವದ ವಿರುದ್ಧ ಮಹಾಘಟ ಬಂಧನ ಮಾಡಿಕೊಂಡು ಮೋದಿಜೀ ಅವರನ್ನು ಸೋಲಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಾದಯಾತ್ರೆಯು ಉರ್ವ ಮಾರಿಗುಡಿ ದೇವಸ್ಥಾನದಿಂದ ಪ್ರಾರಂಭವಾಗಿ ಉರ್ವ ಮಾರ್ಕೇಟ್ ಮೂಲಕ ಸಾಗಿ ಮರಳಿ ಮಾರಿಗುಡಿ ದೇವಸ್ಥಾನದ ಬಳಿ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಪೇಟಾ ಧರಿಸಿ ಹೆಜ್ಜೆ ಹಾಕಿದರು.
You must be logged in to post a comment Login