Connect with us

    LATEST NEWS

    ಮಹಾರಾಷ್ಟ್ರ – ಶಿವಸೇನೆಗೆ ಸಿಎಂ ಪಟ್ಟ ಬಿಟ್ಟುಕೊಟ್ಟ ಬಿಜೆಪಿ.. ಏಕನಾಥ ಶಿಂಧೆ ನೂತನ ಮುಖ್ಯಮಂತ್ರಿ…!!

    ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ಕೊನೆಗೂ ಪೂರ್ಣವಿರಾಮ ಬಿದ್ದಿದ್ದು, ಬಿಜೆಪಿ ಬೆಂಬಲದೊಂದಿಗೆ ಏಕನಾಥ ಶಿಂಧೆ ಅವರ ಶಿವಸೇನಾ ಬಳಗ ಅಧಿಕಾರ ಹಿಡಿದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಈ ಬಾರಿ ಬಿಜೆಪಿ ಶಿವಸೇನೆಗೆ ಸಿಎಂ ಪಟ್ಟವನ್ನು ಬಿಟ್ಟುಕೊಟ್ಟಿದೆ.


    ಶಿವಸೇನಾ ವರಿಷ್ಠ ಸಿಎಂ ಉದ್ಬವ್ ಠಾಕ್ರೆ ವಿರುದ್ದ ಬಂಡಾಯ ಘೋಷಿಸಿ ಶಿವಸೇನೆಯ ಎಲ್ಲಾ ಶಾಸಕರನ್ನು ಜೊತೆಗೆ ತಮ್ಮದೆ ಗುಂಪನ್ನು ಕಟ್ಟಿಕೊಂಡಿದ್ದ ಶಿಂಧೆ, ಕೊನೆಗೂ ಗೆದ್ದಿದ್ದಾರೆ. ನಿನ್ನೆ ಸುಪ್ರೀಂ ಕೋರ್ಟ್ ಇಂದು ವಿಶ್ವಾಸಮತಯಾಚನೆಗೆ ಸೂಚಿಸಿದ ಕಾರಣ, ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆಯವರು ರಾಜೀನಾಮೆ ನೀಡಿದ್ದರು. ವಿಶ್ವಾಸಮತ ಯಾಚನೆಗೂ ಮುನ್ನವೇ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಈ ಬೆನ್ನಲ್ಲೇ ಬಿಜೆಪಿಯಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಚುರುಕಿನ ಪ್ರಕ್ರಿಯೆ ನೆಡೆದಿತ್ತು.
    ಇನ್ನು ಇದೀಗ ಇಂದು ಸಂಜೆ 7:30ಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply