LATEST NEWS
ಮದಿಪು ಚಾರಿಟೇಬಲ್ ಟ್ರಸ್ಟ್ ನ ನೂತನ ಆಡಳಿತ ಕಛೇರಿ ಉದ್ಘಾಟನೆ…
ಉಳ್ಳಾಲ : ದೀನ-ದಲಿತರಿಗೆ ಸಹಾಯಹಸ್ತ ಚಾಚುವ ಉದ್ಧೇಶದಿಂದ ಆರಂಭಗೊಂಡ ಮದಿಪು ಚಾರಿಟೇಬಲ್ ಟ್ರಸ್ಟ್ ನ ನೂತನ ಆಡಳಿತ ಕಛೇರಿ ಕಿನ್ಯದ ಮೀನಾದಿ ಎಂಬಲ್ಲಿ ಮಾರ್ಚ್ 19 ರ ಭಾನುವಾರ ಉದ್ಘಾಟನೆಗೊಂಡಿತು.
ಕಿನ್ಯ ಬೆಳರಿಂಗೆ ಭಂಡಾರ ಮನೆಯ ಮೈಂದ ಪೂಜಾರಿ ನೂತನ ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಡತನ, ಅನಾರೋಗ್ಯ ಮೊದಲಾದ ಸಂಕಷ್ಟಗಳಿಂದ ಬಳಲುತ್ತಿರುವ ಬಾಳಿಗೆ ಮದಿಪು ಚಾರಿಟೇಬಲ್ ಟ್ರಸ್ಟ್ ಬೆಳಕಾಗಲಿ ಎಂದು ಅವರು ಇದೇ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು.
ಬಾಬು, ಶ್ರೀ ಶಾಸ್ತ್ರ ಕಿನ್ಯಾ ,ಗೋಪಾಲಕೃಷ್ಣ ಪೂಜಾರಿ, ಆನಂದ ಪೂಜಾರಿ, ಟ್ರಸ್ಟ್ ನ ನಿರ್ದೇಶಕರಾದ ಲಿಜಿತ್ ಕುಮಾರ್, ಸುಜಿತ್ ಕುಮಾರ್, ಶರತ್ ರಾಜ್, ಮೋಹನ್ ಉಚ್ಚಿಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You must be logged in to post a comment Login