DAKSHINA KANNADA
ಮದಿಪು ಚಾರಿಟೇಬಲ್ ಟ್ರಸ್ಟ್ ನಿಂದ ಬಡ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಸಹಾಯ ನಿಧಿ ಹಸ್ತಾಂತರ.
ಉಳ್ಳಾಲ, ಮಾರ್ಚ್ 21: ಬಡ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ನೆರವು ನೀಡುವ ಮದಿಪು ಚಾರಿಟೇಬಲ್ ಟ್ರಸ್ಟ್, ಕಿನ್ಯಾ ಇದರ ವತಿಯಿಂದ ಹುಟ್ಟಿನಿಂದಲೇ ಅಂಗವೈಕ್ಯಲ್ಯದಿಂದ ಬಳಲುತ್ತಿರುವ ಬಾಲಕಿ ಹಾಗು ಪಾರ್ಶ್ವವಾಯು ಪೀಡಿತ ವೃದ್ಧ ದಂಪತಿಗಳಿಗೆ ಸಹಾಯ ನಿಧಿಯನ್ನು ಮಾರ್ಚ್ 19 ರಂದು ಹಸ್ತಾಂತರಿಸಲಾಯಿತು.
ಕಿನ್ಯಾ ಗ್ರಾಮಪಂಚಾಯತ್ ವ್ಯಾಪ್ತಿಯ ಕನಕಮೊಗೆರು ನಿವಾಸಿಗಳಾದ ಪ್ರಕಾಶ್ ಮತ್ತು ಅಮಿತಾ ದಂಪತಿಗಳ ಪುತ್ರಿ , ಹುಟ್ಟು ಅಂಗವೈಕಲ್ಯತೆಯಿಂದ ಬಳಲುತ್ತಿರುವ ಅಪೇಕ್ಷಾ ಹಾಗು ಪಾರ್ಶ್ವವಾಯು ಪೀಡಿತ ವೆಂಕಪ್ಪ ಮತ್ತು ಕಲ್ಯಾಣಿ ದಂಪತಿಗಳಿಗೆ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.
ಮದಿಪು ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ಲಿಜಿತ್ ಕುಮಾರ್, ಸುಜಿತ್ ಕುಮಾರ್, ಮೋಹನ್ ಉಚ್ಚಿಲ್, ಲೋಲಾಕ್ಷ , ಶರತ್ ಕುಮಾರ್ ಹಾಗು ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀನಿವಾಸ್, ಜಿತೇಂದ್ರ,ಬಾಲಚಂದ್ರ ಆನಂದ ಕಿನ್ಯ, ತಿಮ್ಮಪ್ಪ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You must be logged in to post a comment Login