BANTWAL
ಬಂಟ್ವಾಳ – ಒಣ ಹುಲ್ಲು ಸಾಗಾಟ ಲಾರಿ ಬೆಂಕಿಗಾಹುತಿ
ಬಂಟ್ವಾಳ ಫೆಬ್ರವರಿ 26 : ಒಣ ಹುಲ್ಲು ಸಾಗಾಟದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಶನಿವಾರ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿದೆ.
ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಆಗಮಿಸುತ್ತಿರುವ ವೇಳೆ ಹೊತ್ತಿ ಉರಿದಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಉರಿದಿದೆ ಎನ್ನಲಾಗಿದ್ದು, ಬಂಟ್ವಾಳ ಅಗ್ನಿಶಾಮಕ ಠಾಣೆಯವರು ಬೆಂಕಿ ನಂದಿಸಿದ್ದಾರೆ.
ಜತೆಗೆ ಶನಿವಾರ ತಾಲೂಕಿನ ಸಜೀಪಮೂಡದ ಬೊಳ್ಳಾಯಿ, ಮೊಡಂಕಾಪು ಸಮೀಪದ ಬಂಟಗುರಿ, ಪಲ್ಲಮಜಲಿನಲ್ಲೂ ಗುಡ್ಡ ಪ್ರದೇಶಕ್ಕೆ ಬೆಂಕಿ ಹಿಡಿದಿದೆ. ಬಂಟಗುರಿ, ಪಲ್ಲಮಜಲಿಗೆ ಬಂಟ್ವಾಳ ಅಗ್ನಿಶಾಮಕ ದಳ, ಬೊಳ್ಳಾಯಿಗೆ ಮಂಗಳೂರು ಅಗ್ನಿಶಾಮಕ ದಳದವರು ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ.
You must be logged in to post a comment Login