Connect with us

    DAKSHINA KANNADA

    ಫೀಲ್ಡಿಗಿಳಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್: ಲಾಕ್​​ಡೌನ್​ ಮತ್ತಷ್ಟು ಬಿಗಿ, ಅನಗತ್ಯ ಸಂಚಾರಕ್ಕೆ ಬ್ರೇಕ್

    ಮಂಗಳೂರು, ಮೇ 22: ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್​​ಡೌನ್ ವಿಸ್ತರಿಸಿರುವ ಬೆನ್ನಲ್ಲೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ವತಃ ಫೀಲ್ಡಿಗಿಳಿದು ಅನಗತ್ಯ ಸಂಚಾರ ನಡೆಸುತ್ತಿರುವವರ ವಾಹನಗಳನ್ನು ಸೀಜ್​ ಮಾಡಿ ಪ್ರಕರಣ ದಾಖಲಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ಪ್ರದೇಶದಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್, ಡಿಸಿಪಿ ಹರಿರಾಂ ಶಂಕರ್, ಕದ್ರಿ ಠಾಣಾ ಪೊಲೀಸ್ ಇನ್ಸ್​​ಪೆಕ್ಟರ್ ಸವಿತೃತೇಜ ಹಾಗೂ ತಂಡ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

    ಈ ಸಂದರ್ಭ ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನಗಳನ್ನ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.ಅಲ್ಲದೆ ಕೋವಿಡ್ ಸ್ಟಿಕ್ಕರ್ ಹಾಕಿ ಓಡಾಡುತ್ತಿರುವ ಎಲ್ಲಾ ವಾಹನಗಳಲ್ಲಿನ ಸ್ಟಿಕ್ಕರ್​​ಗಳನ್ನು ಪೊಲೀಸರು ಕಿತ್ತುಹಾಕಿದ್ದಾರೆ. ಸೀಜ್​ ಆಗಿರುವ ವಾಹನಗಳನ್ನು ಅದರ ಮಾಲೀಕರು ಕೋರ್ಟ್ ಮೂಲಕವೇ ಬಿಡಿಸಿಕೊಳ್ಳಬೇಕಾಗುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply