ಮಂಗಳೂರು ಡಿಸೆಂಬರ್ 24: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ ಮೊದಲಬಾರಿಗೆ ನಡೆದಿದ್ದು ಬಿಜೆಪಿ ಅಭೂತಪೂರ್ವ ಜಯವನ್ನ ದಾಖಲಿಸಿದ್ದು ತುಂಬಾ ಸಂತೋಷವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಿಜೇಶ್ ಚೌಟ ಸಂತಸ ವ್ಯಕ್ತ ಪಡಿಸಿದ್ದಾರೆ .


ಮಾಧ್ಯಮದ ಜೊತೆ ಮಾತನಾಡಿದ ಸಂಸದ ಚೌಟ ಈ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷ ,ಪದಾಧಿಕಾರಿಗಳಿಗೆ ಮತ್ತು ಜನತೆಗೆ ಅಭಿನಂದನೆಯನ್ನ ಸಲ್ಲಿಸಿದರು ಈ ಫಲಿತಾಂಶ ರಾಜ್ಯ ಸಿದ್ದರಾಮಯ್ಯ ಸರಕಾರದ ಹಿಂದೂ ವಿರೋಧಿ ,ಜನ ವಿರೋಧಿ , ಭ್ರಷ್ಟಾಚಾರಿ ವಿರುದ್ಧ ಜನ ನೀಡಿದ ತೀರ್ಪು ಎಂದರು .ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದು ಅಧಿಕಾರ ಹಿಡಿಯುತೇವೆ ಎಂದರು

Share Information