Connect with us

    LATEST NEWS

    ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ತಲುಪಿದ್ದ ಮತ್ತೋರ್ವ ಬಾಲಕ ಸಾವು

    ಮಂಗಳೂರು, ಎಪ್ರಿಲ್ 22: ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ್ದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತಿ (6) ಎಂದು ಗುರುತಿಸಲಾಗಿದೆ.


    ಇಂದಿರಾನಗರ ಬೊಳ್ಳೂರಿನ ಮಸೀದಿ ಹಿಂಭಾಗದ ಖಾಸಗಿ ಜಾಗದಲ್ಲಿ ಮೊನ್ನೆ ಸಂಜೆ ನಿಹಾನ್ ಹಾಗೂ ಮಾರುತೇಶ್ ಆಟವಾಡುತ್ತಿದ್ದರು. ಈ ಸಂದರ್ಭ ಸಿಡಿಲು ಬಡಿದಿದ್ದು, ಮಕ್ಕಳಿಬ್ಬರೂ ಮೂರ್ಛೆ ತಪ್ಪಿ ಸ್ಥಳದಲ್ಲಿಯೇ ಬಿದ್ದಿದ್ದರು. ತಕ್ಷಣ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೇ ನಿಹಾನ್ ಮೃತಪಟ್ಟಿದ್ದಾನೆ. ಮಾರುತೇಶ್ ಕೋಮಾ ಸ್ಥಿತಿಯಲ್ಲಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply