Connect with us

    UDUPI

    ಚಿರತೆ ಪತ್ತೆ, ಅರಣ್ಯಾಧಿಕಾರಿಗಳಿಂದ ರಕ್ಷಣೆ

    ಉಡುಪಿ,ಸೆಪ್ಟೆಂಬರ್ 03: ಮೂರು ವರ್ಷ ಚಿರತೆಯೊಂದನ್ನು ಉಡುಪಿ ಅರಣ್ಯ ಇಲಾಖಾಧಿಕಾರಿಗಳು ರಕ್ಷಿಸಿದ್ದಾರೆ. ಉಡುಪಿಯ ಕೊಕ್ಕರ್ಣೆ ಸಮೀಪ ನೀರ್ಜಡ್ಡಿಯಲ್ಲಿ ಈ ಹೆಣ್ಣು ಚಿರತೆಯನ್ನು ರಕ್ಷಿಸಿದ್ದಾರೆ.ಈ ಚಿರತೆ  ಕಳೆದ ಕೆಲ ಸಮಯದಿಂದ  ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದು ,ನಿದ್ದೆಗೆಡಿಸಿತ್ತು. ರಾತ್ರಿಯಾಗುತ್ತಿದ್ದಂತೆ ಗ್ರಾಮಕ್ಕೆ ನುಗ್ಗಿ ನಾಯಿಗಳ ಬೇಟೆಯಾಡುತ್ತಿದ್ದು, ಹೀಗೆ ನಾಯಿಯೊಂದನ್ನು ಅ್ಟಟ್ಟಿಸಿಕೊಂಡು ಬಂದು ಉರುಳು ತಂತಿಗೆ ಸಿಕ್ಕಿಹಾಕಿಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ್ದಾರೆ. ಅರಣ್ಯಾಧಿಕಾರಿಗಳು ತಜ್ಞ ವೈದ್ಯರುಗಳೊಂದಿಗೆ ಸ್ಥಳಕ್ಕೆ ತೆರಳಿ ಅರವಳಿಕೆ ಮದ್ದನ್ನು ನೀಡಿ, ಚಿರತೆಯನ್ನು ಬೋನಿಗೆ ವರ್ಗಾಯಿಸಿ ದೂರದ ರಕ್ಷಿತಾರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply