DAKSHINA KANNADA
ಸುಬ್ರಹ್ಮಣ್ಯ – ಕೋಳಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆ
ಸುಬ್ರಹ್ಮಣ್ಯ ನವೆಂಬರ್ 07: ಕೋಳಿ ಹಿಡಿಯಲು ಹೋಗಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ರಾಮಯ್ಯ ಎಂಬುವರಿಗೆ ಸೇರಿದ ಬಾವಿಗೆ ಚಿರತೆ ಬಿದ್ದಿದೆ.
ಆಹಾರಕ್ಕೆಂದು ನಾಡಿಗೆ ಬಂದ ಚಿರತೆ ಈ ಬಾರಿ ನಾಯಿಯನ್ನು ಬಿಟ್ಟು ಕೋಳಿಗೆ ಹೊಂಚು ಹಾಕಿ ಬೇಟೆಯಾಡಲು ಹೋಗಿದೆ. ಆದರೆ ಕೋಳಿ ಹಿಡಿಲು ಹೋಗಿ ಬಿದ್ದಿದ್ದು ಮಾತ್ರ ಬಾವಿಗೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯ ರಕ್ಷಣಾ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ.
You must be logged in to post a comment Login